ಸೌರವ್ ಗಂಗುಲಿ ಚೇತರಿಕೆ

Update: 2021-01-06 06:45 GMT

 ಕೋಲ್ಕತಾ, ಜ.5: ಹೃದಯಾಘಾತದಿಂದಾಗಿ ಕೋಲ್ಕತಾದ ವಿಡ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆಯ ಸಿಇಒ ಡಾ.ರೂಪಾಲಿ ಬಸು ತಿಳಿಸಿದಾರೆ. ವ್ಯಾಯಾಮ ಮಾಡುತ್ತಿದ್ದಾಗ ಲಘ ಹೃದಯಾಘಾತದಿಂದಾಗಿ ಶನಿವಾರ ಆಸ್ಪತ್ರೆ ಸೇರಿದ್ದ ಗಂಗುಲಿ ಅವರ ಹೃದಯದ ರಕ್ತನಾಳಗಳಲ್ಲಿ ಬ್ಲಾಕ್‌ಗಳು ಕಂಡು ಬಂದಿದ್ದರಿಂದ ಆ್ಯಂಜಿಯೊಪ್ಲಾಸ್ಟಿ ನಡೆಸಿ, ಒಂದು ಕಡೆ ಸ್ಟೆಂಟ್ ಅಳವಡಿಸಲಾಗಿದೆ. ಖ್ಯಾತ ಹೃದಯ ತಜ್ಞರಾದ ಡಾ.ದೇವಿ ಶೆಟ್ಟಿ ಅವರು ಸೌರವ್ ಗಂಗುಲಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಸೇರಿಕೊಂಡಿದ್ದಾರೆ. ಗಂಗುಲಿ ಅವರಿಗೆ 9 ಮಂದಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಗಂಗುಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡರೂ ಮನೆಯಲ್ಲಿಯೇ ಮುಂದಿನ ಹಂತದ ಚಿಕಿತ್ಸೆ ಮುಂದುವರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News