×
Ad

ಯುನಿವೆಫ್ ಕರ್ನಾಟಕ : ಜ.8ರಂದು ಬಜ್ಪೆಯಲ್ಲಿ ಸೀರತ್ ಸಮಾವೇಶ

Update: 2021-01-07 15:27 IST

ಮಂಗಳೂರು : ಯುನಿವೆಫ್ ಕರ್ನಾಟಕ 2020ರ ನ. 27ರಿಂದ 2021ರ ಜ.29ರವರೆಗೆ "ಸಾಮಾಜಿಕ ತಾರತಮ್ಯ ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ ಬಜ್ಪೆ ಶಾಖೆಯ ವತಿಯಿಂದ ಜ.8ರ  ಸಂಜೆ 6.45ಕ್ಕೆ  ಬಜ್ಪೆ ಪೆಟ್ರೋಲ್ ಪಂಪ್ ಎದುರುಗಡೆ ಇರುವ ಲೈಕೋರಿಸ್ ಟೌನ್ ಫ್ಲ್ಯಾಟ್ ವಠಾರದಲ್ಲಿ  ಸೀರತ್ ಸಮಾವೇಶ ಜರಗಲಿದೆ.

"ಭಾರತದಲ್ಲಿ ಇಸ್ಲಾಮ್ ಮತ್ತು ಪ್ರವಾದಿ(ಸ)" ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಉಪನ್ಯಾಸ  ನೀಡಲಿದ್ದಾರೆ ಎಂದು ಬಜ್ಪೆ ಶಾಖಾಧ್ಯಕ್ಷ ಅಬ್ದುರ್‍ರಹ್ಮಾನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News