ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಎಸ್ ಡಿಪಿಐಯಿಂದ ಅಭಿನಂದನಾ ಕಾರ್ಯಕ್ರಮ

Update: 2021-01-09 15:28 GMT

ಪುತ್ತೂರು : ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ ಡಿಪಿಐ) ಸವಣೂರು ವಲಯ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಮಾಂತೂರು ಅಂಬೇಡ್ಕರ್ ಭವನದಲ್ಲಿ ಶನಿವಾರ  ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಸವಣೂರು ವಲಯ ಅಧ್ಯಕ್ಷ ಸಿದ್ದೀಕ್ ಅಲೆಕ್ಕಾಡಿ ವಹಿಸಿದ್ದರು.

ಎಸ್ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ಲತೀಫ್ ಪುತ್ತೂರು ಮಾತನಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಮತ್ತೊಮ್ಮ ಪ್ರತಿ ಮತದಾರರ ಬಳಿ ಭೇಟಿಯಾಗಿ ಮತದಾರರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರವನ್ನೊದಗಿಸುವ ಕಾರ್ಯಕ್ಕೆ ಮುಂದಾ ಗಬೇಕು. ನಿಮ್ಮ ವಾರ್ಡ್‌ನ ಯಾವುದೇ ಸಮಸ್ಯೆಗೆ ಯಾವುದೇ ಪಕ್ಷಭೇದವಿಲ್ಲದೆ ಸ್ಪಂದಿಸುವವರಾಗಬೇಕೆಂದು ಕಿವಿಮಾತು ನೀಡಿದರು.

ಎಸ್ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ಶಾಫಿ ಬೆಳ್ಳಾರೆ ಮಾತನಾಡಿ ಆಯ್ಕೆಯಾದರು ಕೇವಲ ನಿಮ್ಮ ವಾರ್ಡ್‌ಗಳಿಗೆ ಸೀಮಿತವಾಗಿರದೆ ಇಡೀ ಪಂಚಾಯತ್ ವ್ಯಾಪ್ತಿಯ ಬಡವರ, ನೊಂದವರ ಧ್ವನಿಯಾಗಿರಬೇಕು. ಸರ್ಕಾರಿ ಸವಲತ್ತುಗಳು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಪಾಲಾಗದೆ ಅರ್ಹರಿಗೆ ತಲುಪಿಸುವ ಭ್ರಷ್ಟಾಚಾರ ರಹಿತ ಆಡಳಿತ ನೀಡುವಲ್ಲಿ ಮುಂಚೂಣಿಯಲ್ಲಿರಬೇಕೆಂದು ಕರೆ ನೀಡಿದರು.

ಸವಣೂರು ಗ್ರಾಮ ಪಂಚಾಯತ್‌ನ ವಾರ್ಡ್ 1ರಲ್ಲಿ ಸ್ಪರ್ಧಿಸಿದ ಬಶೀರ್ ಕಾಯಾರ್ಗ,  ಮೀನಾಕ್ಷಿ, ರಶೀದಾ ಕುಕ್ಕುಜೆ , ಪಾಲ್ತಾಡಿ 1 ಮತ್ತು 2ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ ಎ ಆರ್ ರಝಾಕ್, ಶೇಕ್ ರಝಾಕ್, ರಹ್‌ಮಾನ್ ಹಾಗೂ ಬೆಳಂದೂರು ಗ್ರಾಮ ಪಂಚಾಯತ್‌ನ ಕುದ್ಮಾರು 2ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ ಉಸ್ಮಾನ್ ಕೂರ ಮತ್ತು ಸವಣೂರು 2 ಮತ್ತು 3ನೇ ವಾರ್ಡ್‌ನಿಂದ ಆಯ್ಕೆಯಾದ ರಫೀಕ್ ಎಂ ಎ,  ಚೆನ್ನು, ಶಬೀನಾ , ರಝಾಕ್ ಕೆನರಾ, ಬಾಬು ಎನ್ ಸವಣೂರು ರನ್ನು ಈ ಸಂದರ್ಭದಲ್ಲಿ  ಅಭಿನಂದಿಸಲಾಯಿತು.

ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬಿರ್ ಅರಿಯಡ್ಕ, ಸವಣೂರು ಡಿವಿಷನ್ ಅಧ್ಯಕ್ಷರಾದ ರಫೀಕ್ ಎಂ ಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಟಾಸ್ಕೋ, ಬದ್ರಿಯಾ ಜುಮಾ ಮಸೀದಿ ಚಾಪಲ್ಲ ಅಧ್ಯಕ್ಷರಾದ ಉಮ್ಮರ್ ಹಾಜಿ ಕೆನರಾ, ಮಿಹ್‌ರಾಜ್ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಹಸೈನಾರ್ ಹಾಜಿ ಪರಣೆ, ಯುವ ಉಧ್ಯಮಿ ಬಿ ಎಂ ಮಹಮ್ಮದ್, ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ ಸವಣೂರು ಗೌರವಾಧ್ಯಕ್ಷರಾದ ಅಬ್ದುಲ್ ಕಾದರ್ ಚೆಡವು, ಸವಣೂರು ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ರಿಯಾದ್ ಅಧ್ಯಕ್ಷರಾದ ನಝೀರ್ ಸಿ ಎ, ಕರ್ಣಾಟಕ ಮುಸ್ಲಿಂ ಜಮಾಅತ್ ಸವಣೂರು ಕಾರ್ಯದರ್ಶಿ ಅಬ್ದುಲ್ಲಾ ಎಸ್ ಇ, ಎಸ್ಡಿಪಿಐ ಸವಣೂರು ವಲಯ ಉಪಾಧ್ಯಕ್ಷರಾದ ಸಲೈಮಾನ್ ಪಲ್ಲತಮೂಲೆ, ಎಸ್ಡಿಪಿಐ ಪುತ್ತೂರು ವಿಧಾನ ಸಭಾ ಸಮಿತಿ ಸದಸ್ಯರಾದ ಪಿಬಿಕೆ ಮಹಮ್ಮದ್, ಪಾಪ್ಯುಲರ್ ಫ್ರಂಟ್ ಸವಣೂರು ಏರಿಯಾ ಅಧ್ಯಕ್ಷರಾದ ಇರ್ಷಾದ್ ಸರ್ವೆ ಸಹಿತ ಹಲವು ಗಣ್ಯರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಹಿತ ಹಲವರು ಉಪಸ್ಥಿತರಿದ್ದರು. ಸಂಶೀರ್ ಸ್ವಾಗತಿಸಿದರು, ರಫೀಕ್ ಪಣೆಮಜಲ್ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News