ಮಂಗಳೂರು : ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿಗಳ ಆಯ್ಕೆ

Update: 2021-01-10 11:25 GMT

ಮಂಗಳೂರು, ಡಿ.3: ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್‌ನ ವಾರ್ಷಿಕ ಮಹಾಸಭೆಯು ರವಿವಾರ ಜರುಗಿತು.

ಸಂಸ್ಥೆಯ ಡೈರೆಕ್ಟರ್ ಕೆ.ಕೆ.ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಹೀರ್ ಕೂಡಾರ ಕಿರಾಅತ್ ಮೂಲಕ ಪ್ರಾರಂಭಿಸಿದರು. ನಂತರ ನಡೆದ ಭಾಷಣ ಹಾಗೂ ಕ್ವಿಝ್ ಕಾರ್ಯಕ್ರಮ ಜರುಗಿದ್ದು, ಕ್ವಿಝ್‌ನಲ್ಲಿ ಪ್ರಥಮ ಸ್ಥಾನ ಫಝಲ್ ಶಿಹಾಬ್ ದ್ವಿತಿಯ ಸ್ಥಾನ ಶೇಕ್ ಇಬ್ರಾಹೀಂ ಪಡೆದರು.

ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಅಬ್ಬಾಸ್ ಕಿನ್ಯ, ಉಪಾಧ್ಯಕ್ಷರಾಗಿ ಮುಸ್ತಫ ಕೂಡಾರ, ಪ್ರಧಾನ ಕಾರ್ಯದರ್ಶಿಯಾಗಿ  ಖಾದರ್ ಉಕ್ಕುಡ, ಜೊತೆ ಕಾರ್ಯದರ್ಶಿಯಾಗಿ ಖಲೀಲ್ ಕಿನ್ಯ, ಖಜಾಂಜಿಯಾಗಿ ಬಿ.ಅಬ್ದುಲ್ ಗಫೂರ್ ಉಕ್ಕುಡ ಅವರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.

ಖಲೀಲ್ ಕಿನ್ಯ ಸ್ವಾಗತಿಸಿ ವರದಿ ಮಂಡಿಸಿದರು, ಶೇಕ್ ಇಬ್ರಾಹಿಂ ಪ್ರಾಸ್ತಾವಿಕ ಭಾಷಣ ಮಾಡಿ ಸಂಸ್ಥೆಯ ಚಟುವಟಿಕೆಯ ಬಗ್ಗೆ ವಿವರಿಸಿದರು. ಅಶ್ರಫ್ ಉಕ್ಕುಡ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಯೂಸುಫ್ ಕುರಿಯಕ್ಕಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News