ಉಡುಪಿ ಶ್ರೀಕೃಷ್ಣಮಠದಲ್ಲಿ ಯಾತ್ರಾರ್ಥಿಗಳ ಭೋಜನಕ್ಕೆ ಚಾಲನೆ
Update: 2021-01-10 18:56 IST
ಉಡುಪಿ, ಜ.10: ಉಡುಪಿ ಶ್ರೀಕೃಷ್ಣ ಮಠದಲ್ಲಿ ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಯಾತ್ರಾರ್ಥಿಗಳಿಗೆ ಶ್ರೀಕೃಷ್ಣ ಪ್ರಸಾದ ರೂಪದಲ್ಲಿ ನೀಡುವ ಭೋಜನದ ವ್ಯವಸ್ಥೆಗೆ ಇಂದು ಮತ್ತೆ ಚಾಲನೆ ನೀಡಲಾಯಿತು
ಮಠದ ಭೋಜನಶಾಲೆಯಲ್ಲಿ ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಅನ್ನಪ್ರಸಾದವನ್ನು ಬಡಿಸುವುದರ ಮೂಲಕ ಯಾತ್ರಾರ್ಥಿಗಳ ಭೋಜನಕ್ಕೆ ಚಾಲನೆ ನೀಡಿದರು. ಇಂದಿನಿಂದ ಪ್ರತಿದಿನ ಭೋಜನ ಶಾಲೆಯಲ್ಲಿ ಭೋಜನದ ವ್ಯವಸ್ಥೆ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಪರ್ಯಾಯ ಮಠದ ವ್ಯವಸ್ಥಾಪಕರ ಗೋವಿಂದರಾಜ್, ಪರ್ಯಾಯ ಮಠದ ರೋಹಿತ್ ತಂತ್ರಿ, ಶ್ರೀಕೃಷ್ಣ ಸೇವಾ ಸಮಿತಿಯ ಗಣೇಶ್ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು