ಮೂಡುಬಿದಿರೆ : ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ, ಸನ್ಮಾನ ಕಾರ್ಯಕ್ರಮ

Update: 2021-01-11 07:33 GMT

ಮೂಡುಬಿದಿರೆ :  'ನಮ್ಮ ನಾಡ ಒಕ್ಕೂಟ ಮೂಡಬಿದ್ರೆ ಘಟಕ' ಹಾಗು ಸೌಹಾರ್ದ ಮೂಡಬಿದ್ರೆ ಇವರ ಜಂಟಿ ಆಶ್ರಯದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ ಹಾಗು ಸನ್ಮಾನ ಕಾರ್ಯಕ್ರಮ ನಡೆಯಿತು.

ನಮ್ಮ ನಾಡ ಒಕ್ಕೂಟದ ಉಪಾಧ್ಯಕ್ಷ ಡಾ. ರಿಝ್ವಾನ್ ಅಹ್ಮದ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗದ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ಪ್ರಾರಂಭದಿಂದಲೂ ಇದರ ಬಗ್ಗೆ ಆಸಕ್ತಿ ವಹಿಸಿದರೆ ತನ್ನ ವಿದ್ಯಾಭ್ಯಾಸ ಮುಗಿಯುವಾಗ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಸಮಯಾವಕಾಶ ಸಿಗುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟದ ಖಜಾಂಚಿ ಅಬ್ದುಲ್ ಹಮೀದ್ ವಹಿಸಿದ್ದರು. ಸಭೆಯಲ್ಲಿ  ಸೌಹಾರ್ದ ಮೂಡಬಿದ್ರೆ ಅಧ್ಯಕ್ಷ ಅಬುಲಾಲ್, ಕಾರ್ಯದರ್ಶಿ ಮುಹಮ್ಮದ್ ಶರೀಫ್, ನಮ್ಮ ನಾಡ ಒಕ್ಕೂಟ ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ, ನಮ್ಮ ನಾಡ ಒಕ್ಕೂಟ ಬಂಟ್ವಾಳ ಘಟಕದ ಅಧ್ಯಕ್ಷ ಪಿ.ಎ.ರಹೀಮ್ ಉಪಸ್ಥಿತರಿದ್ದರು.

ಸರ್ಕಾರಿ ಉದ್ಯೋಗದಲ್ಲಿರುವ ಬಶೀರ್ ಅಹ್ಮದ್ (ಎಸ್.ಅರ್.ಒ. ಮಂಗಳೂರು) , ಅಬೂಬಕ್ಕರ್ (ವಕ್ಫ್ ಬೋರ್ಡ್ ಆಫಿಸರ್ ದಕ್ಷಿಣ ಕನ್ನಡ), ಡಾ. ಶೆಹನಾಝ್ ಬೇಗಂ (ಆಯುಷ್ ಮೆಡಿಕಲ್ ಅಧಿಕಾರಿ, ಸಮುದಾಯ ಅರೋಗ್ಯ ಕೇಂದ್ರ ಮೂಡುಬಿದಿರೆ), ಯಾಶಿನ (ಬಿಲ್ ಕಲೆಕ್ಟರ್ ,ಪುರಸಭೆ ಮೂಡುಬಿದಿರೆ)  ಇವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ಅಬ್ದುಲ್ ರಝಾಕ್ ಕಾಪು, ನೌಝಲ್ ಮುಲ್ಕಿ ಮಾಹಿತಿ ನೀಡಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News