ಉಳ್ಳಾಲ: ಎಸ್ಕೆ ಎಸ್ಸೆಸೆಫ್ ಮುನ್ನಡೆ ಯಾತ್ರೆ ಸ್ವೀಕಾರ ಕಾರ್ಯಕ್ರಮ

Update: 2021-01-11 14:09 GMT

ಉಳ್ಳಾಲ: ಎಸ್ಕೆ ಎಸ್ಸೆಸೆಫ್ ಕೇಂದ್ರೀಯ ಅಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಹಮೀದ್ ಅಲಿ ಶಿಹಾಬ್ ತಂಙಳ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮುನ್ನಡೆ ಯಾತ್ರೆ  ಸ್ವೀಕಾರ ಕಾರ್ಯಕ್ರಮ  ಉಳ್ಳಾಲ ದಲ್ಲಿ ನಡೆಯಿತು.

ಕಾರ್ಯಕ್ರಮ ದ ನೇತೃತ್ವ ವಹಿಸಿದ್ದ ಮುಸ್ತಫಾ ಅಬ್ದುಲ್ಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಾಣಕ್ಕಾಡ್ ಕುಟುಂಬ ದ ಮಹತ್ವದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಕ್ಕೆ ಆಗಮಿಸಿದ ಪಾಣಕ್ಕಾಡ್ ಹಮೀದ್ ಅಲಿ ಶಿಹಾಬ್ ತಂಙಳ್ ಅವರನ್ನು ಮುಸ್ತಫಾ ಅಬ್ದುಲ್ಲಾ ಹಾಗೂ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಅವರು ಶಾಲು ಹೊಂದಿಸಿ ಸನ್ಮಾನಿಸುವ ಮೂಲಕ ಸ್ವೀಕರಿಸಿದರು. ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಧಾರ್ಮಿಕ ಸಂಘಟನೆಗಳ ಮೂಲಕ ಉತ್ತಮ ಕಾರ್ಯ ಚಟುವಟಿಕೆ ಮಾಡಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಉಸ್ಮಾನ್ ಫೈಝಿ ಉದ್ಘಾಟಿಸಿ ದರು. ಅಮೀರ್ ತಂಙಳ್ ದುವಾ ನೆರವೇರಿಸಿದರು ಶಾಸಕ ಖಾದರ್, ದರ್ಗಾ ಅಧ್ಯಕ್ಷ ರಶೀದ್ ಹಾಜಿ, ಮಂಗಳೂರು ಖಾಝಿ ತ್ವಾಕಾ ಉಸ್ತಾದ್,ಸತ್ತಾರ್ , ಕುಕ್ಕಿಲ ದಾರಿಮಿ, ಹಾರೂನ್ ಅಹ್ಸನಿ, ನಝೀರ್ ಉಳ್ಳಾಲ,ಫಾರೂಕ್ ಉಳ್ಳಾಲ್, ಯು.ಕೆ.ಹನೀಫ್ ನಿಝಾಮಿ, ಉಸ್ಮಾನ್ ಫೈಝಿ ತೋಡಾರ್, ಇಬ್ರಾಹಿಂ ಬಾಖವಿ, ಇಕ್ಬಾಲ್ ಬಾಳಿಲ, ಬಶೀರ್ ಅಹ್ಸನಿ,ಝೈನ್ ಸಖಾಫಿ,ನಾಸರ್ ಮಾಸ್ಟರ್,

ತಬೂಕು ದಾರಿಮಿ, ಕುಕ್ಕಿಲ ದಾರಿಮಿ,  ಆಸೀಫ್ ಅಬ್ದುಲ್ಲಾ, ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News