ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಂದ ಅಹವಾಲು ಸ್ವೀಕಾರ
Update: 2021-01-12 20:47 IST
ಉಡುಪಿ, ಜ.12: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ಸೋಮವಾರ ಪೆರ್ಡೂರಿನಲ್ಲಿ ಅನಂತ ಸೌರಭ-ಕುಂಬಾರರ ಸಂಘದ ಅಧ್ಯಕ್ಷರು ಮತ್ತು ದಸ್ಯರೊಂದಿಗೆ ಚರ್ಚೆ ನಡೆಸಿದರು.
ನಂತರ ಕೊಕ್ಕರ್ಣೆಯ ಒಳಬೈಲುನಲ್ಲಿ ವಾಸವಿರುವ ಕುಡುಬಿ ಜನಾಂಗದವರು ಅಧಿಕ ಸಂಖ್ಯೆಯಲ್ಲಿರುವ ಸ್ಥಳದ ಪರಿಶೀಲನೆ, ಸ್ಯಾಬ್ರಕಟ್ಟೆಯಲ್ಲಿ ಕಲ್ಲುವಡ್ಡರ ಬೋವಿ ಜನಾಂಗದವರೊಂದಿಗೆ ಸಂವಾದ ನಡೆಸಿದರು. ಕೆದೂರು ಗ್ರಾಮದ ಹಿಂದುಗಳಿದ ವರ್ಗಗಳ ಬೋವಿ ಜನಾಂಗದವರ ಕಾಲನಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.