ಹೊಳೆಯಲ್ಲಿ ಮುಳುಗಿ ಮೃತ್ಯು

Update: 2021-01-12 16:19 GMT

ಬ್ರಹ್ಮಾವರ, ಜ.12: ಹೊಳೆಯ ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೂಡುತೋಟ ಎಂಬಲ್ಲಿ ಜ.12ರಂದು ಮಧ್ಯಾಹ್ನ 1.15ರ ಸುಮಾರಿಗೆ ನಡೆದಿದೆ.

ಮೃತರನ್ನು ಹನೇಹಳ್ಳಿ ಗ್ರಾಮದ ಬಂಡೀಮಠ ನಿವಾಸಿ ಲಕ್ಷ್ಮಣ(44) ಎಂದು ಗುರುತಿಸಲಾಗಿದೆ. ಇವರು ಸಂಬಂಧಿಕರಾದ ಕೀರ್ತನ್, ವಿಕ್ರಮ್, ವಿಕ್ರಾಂತ್, ಸುದೀಪ್ ರವರೊಂದಿಗೆ ಮನೆಯ ಹತ್ತಿರದ ಮೂಡುತೋಟ ಸೀತಾನದಿಯ ಹೊಳೆಯಲ್ಲಿ ಮೊಳಿಯನ್ನು ಹೆಕ್ಕಲು ಹೋಗಿದ್ದರು.

ಅಲ್ಲಿ ಒಂದು ಬದಿಯಿಂದ ಇನ್ನೊಂದು ಬದಿಯ ದಂಡೆಗೆ ಬರುತ್ತಿದ್ದ ಈಜು ಬಾರದ ಲಕ್ಷ್ಮಣ್ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News