ಉಡುಪಿ ಕೃಷ್ಣನಿಗೆ ಇಂದು ‘ಸುವರ್ಣ ಛತ್ರ’ ಸಮರ್ಪಣೆ

Update: 2021-01-13 14:10 GMT

ಉಡುಪಿ, ಜ.13: ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಉಡುಪಿ ಶ್ರೀಕೃಷ್ಣನಿಗೆ ನೂತನವಾಗಿ ನಿರ್ಮಿಸಲಾದ ‘ಸುವರ್ಣ ಛತ್ರ’ವನ್ನು ಜ.14ರ ಮಕರ ಸಂಕ್ರಮಣದ ಸಂದರ್ಭದಲ್ಲಿ ಸಮರ್ಪಿಸಲಿದ್ದಾರೆ.

ಮನಸೆಳೆಯುವ ಕುಸುರಿಕಲೆಯೊಂದಿಗೆ ಚಿನ್ನದಲ್ಲಿ ನಿರ್ಮಿಸಿರುವ ಈ ಸುವರ್ಣ ಛತ್ರಿ 2.5ಕೆ.ಜಿ. ತೂಕವಿದೆ. ಇದನ್ನು ಒಟ್ಟು 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮಠದಲ್ಲಿ ಹಳೆ ಬಂಗಾರದಿಂದ ಬಂದ 15 ಲಕ್ಷರೂ.ವನ್ನು ಇದಕ್ಕಾಗಿ ಬಳಸಲಾಗಿತ್ತು.

ಪಾಜಕದ ಶಿಲ್ಪಿ ರಾಘವೇಂದ್ರಾಚಾರ್ಯ ಕುಂಜಾರುಗಿರಿ ಇವರು ಉಡುಪಿಯ ಸಂತೋಷ್ ಶೇಟ್ ಇವರ ಉಸ್ತುವಾರಿಯಲ್ಲಿ ಈ ಸುವರ್ಣ ಛತ್ರವನ್ನು ನಿರ್ಮಿಸಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News