ಡಾ. ಅನುರಾಧಗೆ ಪಿಎಚ್ಡಿ
Update: 2021-01-14 14:57 GMT
ಉಡುಪಿ, ಜ14: ಮಣಿಪಾಲ ತಾಂತ್ರಿಕ ವಿದ್ಯಾಲಯದ (ಎಂಐಟಿ) ಗಣಿತ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಅನುರಾಧ ಇವರು ಡಾ.ಶ್ರೀವತ್ಸಕುಮಾರ್ ಬಿ.ಆರ್. ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಪಿಎಚ್ಡಿ ಪದವಿ ಪ್ರದಾನ ಮಾಡಿದೆ.
ಡಾ. ಅನುರಾಧ, ಉಡುಪಿಯ ದಿ.ದೇವದಾಸ್ ನಾಯಕ್ ಮತ್ತು ಉದಯ ನಾಯಕ್ ದಂಪತಿ ಪುತ್ರಿ ಹಾಗೂ ರವಿಕಿರಣ ಬಿ.ಪೈ ಇವರ ಧರ್ಮಪತ್ನಿ.