ಕಮಿಷನ್ ಹಣ ಕೊಡದಿದ್ದಕ್ಕೆ ಚೂರಿಯಿಂದ ಇರಿತ
Update: 2021-01-14 15:08 GMT
ಕಾಪು, ಜ.19: ಜಾಗ ಖರೀದಿಸಿದಕ್ಕೆ ಕಮಿಷನ್ ನೀಡುವ ವಿಚಾರದಲ್ಲಿ ಚೂರಿಯಿಂದ ಇರಿದು ಗಾಯಗೊಳಿಸಿರುವ ಘಟನೆ ಜ.12ರಂದು ಮಧ್ಯಾಹ್ನ ವೇಳೆ ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ಅನ್ನಪೂರ್ಣ ಹೋಟೆಲ್ ಬಳಿ ನಡೆದಿದೆ.
ಗಾಯಗೊಂಡಿರುವ ಗಣೇಶ್ ಬಿ. ಎಂಬವರು ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಕ್ಷಾದಲ್ಲಿ ಬಂದ ಕೀರ್ತಿ ಎಂಬಾತ ಜಾಗ ಖರೀದಿಸಿದ ಬಗ್ಗೆ 2 ಪರ್ಸಂಟ್ ಕಮಿಷನ್ ಕೊಡು ವಂತೆ ಗಣೇಶ್ರಲ್ಲಿ ಒತ್ತಾಯಿಸಿದನು. ಅದಕ್ಕೆ ಗಣೇಶ್ ಜಾಗ ನೊಂದಾಣಿ ಯಾದ ನಂತರ ಮಾತಾನಾಡುವ ಎಂದು ಹೇಳಿದರು. ಇದರಿಂದ ಸಿಟ್ಟಾದ ಕೀರ್ತಿ ಚೂರಿಯಿಂದ ಗಣೇಶ್ರ ಎಡಕಿವಿಗೆ ಮತ್ತು ತಲೆಗೆ ಇರಿದು, ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.