ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Update: 2021-01-15 13:41 GMT

ಮುಡಿಪು, ಜ.15: ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ವಾರ್ಷಿಕ ಮಹಾಸಭೆ ಗುರುವಾರ ರಾತ್ರಿ ನಂದರ್ ಪದವು ಎಸ್.ಕೆ ಮಲ್ಟಿಪರ್ಪಸ್ ಹಾಲ್ ನಲ್ಲಿ ಡಿವಿಶನ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಕಾರ್ಯಕ್ರಮವನ್ನು ಕೆಸಿಎಫ್ ನ್ಯಾಷನಲ್ ಕೌನ್ಸಿಲ್ ನಾಯಕ ಮೂಸ ಹಾಜಿ ಬಸರ ಅವರು ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ದ.ಕ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಖಾಮಿಲ್ ಸಖಾಫಿ ಉಳ್ಳಾಲ, ಕೋಶಾದಿಕಾರಿ ಆಬಿದ್ ನಈಮಿ ಕಟ್ಟತ್ತಿಲ ತರಗತಿ ನಡೆಸಿದರು.

ಡಿವಿಷನ್ ಪ್ರಧಾನ ಕಾರ್ಯದರ್ಶಿ ನೌಫಲ್ ಫರೀದ್ ನಗರ ಅವರು ವರದಿ ವಾಚಿಸಿದರು. ಕೋಶಾದಿಕಾರಿ ಇಕ್ಬಾಲ್ ಮದ್ಯನಡ್ಕ ಲೆಕ್ಕಪತ್ರ ಮಂಡಿಸಿದರು. ನಂತರ ವೆಸ್ಟ್ ಝೋನ್ ನಾಯಕ, ಚುನಾವಣೆ ವೀಕ್ಷಕರಾಗಿ ಆಗಮಿಸಿದ ಸಿದ್ದೀಖ್ ಬಜ್ಪೆ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಮನ್ಸೂರ್ ಹಿಮಮಿ ಮರಿಕ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಮದನಿ ಹೆಚ್.ಕಲ್ಲು ಹಾಗೂ ಕೋಶಾಧಿಕಾರಿಯಾಗಿ ಅಬೂಸ್ವಾಲಿ ಹರೇಕಳರವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಮಸೂದ್ ಬಾಹಸನಿ ಮಂಜನಾಡಿ ಮತ್ತು ನೌಫಲ್ ಫರೀದ್ ನಗರ, ಕಾರ್ಯದರ್ಶಿಗಳಾಗಿ ಶರೀಫ್ ಪಾಣೇಲ, ಉಬೈದ್ ಕೊಣಾಜೆ, ಮುನೀರ್ ಕಲ್ಮಿಂಜ, ಝೈನುದ್ದೀನ್ ಇರಾ, ಹುಸೈನ್ ಸಖಾಫಿ ಮುಡಿಪು, ನಾಸಿರ್ ಮೋಂಟುಗೋಳಿ ಆಯ್ಕೆಯಾದರು.

ಸಭೆಯಲ್ಲಿ ಜಿಲ್ಲಾ ನಾಯಕರಾದ ತೌಸೀಫ್ ಸಅದಿ, ನವಾಝ್ ಸಖಾಫಿ, ಝೋನ್ ನಾಯಕರಾದ ಝುಹೈರ್ ಮಾಸ್ಟರ್, ಇಲ್ಯಾಸ್ ಪೊಟ್ಟೊಳಿಕೆ, ಮನ್ಸೂರ್ ಬಜಾಲ್, ಶರೀಫ್ ಮುಡಿಪು, ಎಸ್.ವೈ.ಎಸ್ ನಾಯಕರಾದ ಶರೀಫ್ ಸಅದಿ ಅರಫ, ಅಝೀಝ್ ಹೆಚ್.ಕಲ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನೌಫಲ್ ಫರೀದ್ ನಗರ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ನೌಶಾದ್ ಮದನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News