ಹಿಡಿಯಲು ಹೋದ ಹಾವು ಕಚ್ಚಿ ಯುವಕ ಮೃತ್ಯು

Update: 2021-01-15 15:52 GMT

ಶಂಕರನಾರಾಯಣ, ಜ.18: ಹಿಡಿಯಲು ಹೋದ ಹಾವು ಕಚ್ಚಿದ ಪರಿ ಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜ.14ರಂದು ಅಪರಾಹ್ನ 3.30ರ ಸುಮಾರಿಗೆ ಹೆಂಗವಳ್ಳಿ ಗ್ರಾಮದ ಹೊಗೆ ಬೆಳಾರ್ ಎಂಬಲ್ಲಿ ನಡೆದಿದೆ.

ಮೃತರನ್ನು ಸ್ಥಳೀಯ ನಿವಾಸಿ ಶೇಖ್ ಅನ್ವರ್ ಎಂಬವರ ಮಗ ಮುಹಮ್ಮದ್ ಆಲಮ್ ಎಂದು ಗುರುತಿಸಲಾಗಿದೆ. ಇವರು ಹೆಂಗವಳ್ಳಿ ಗ್ರಾಮದ ಚಂದ್ರ ಪೂಜಾರಿ ಎಂಬವರ ಮನೆಯ ಬಳಿ ಬಂದ ನಾಗರ ಹಾವು ಹಿಡಿಯಲು ಹೋಗಿದ್ದರು. ಆಗ ಹಾವು ಅಕಸ್ಮಿಕವಾಗಿ ಆಲಮ್ ಅವರಿಗೆ ಕಚ್ಚಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಅಸ್ವಸ್ಥಗೊಂಡ ಅವರು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News