ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

Update: 2021-01-15 15:59 GMT

ಉಡುಪಿ, ಜ15: ವಿದ್ಯಾಪೋಷಕ್‌ನ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಪ್ರಾಯೋಜಿತ ಧ್ವನಿ ಪೌಂಡೇಶನ್ ನೀಡಿದ 51 ಟ್ಯಾಬ್‌ಗಳ ವಿತರಣೆ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಜರಗಿತು.

ದ್ವಿತೀಯ ಪಿ.ಯು.ಸಿಯಲ್ಲಿ ಓದುತ್ತಿರುವ ವಿದ್ಯಾಪೋಷಕ್ ಫಲಾನುಭವಿ 51 ಮಂದಿ ವಿದ್ಯಾರ್ಥಿಗಳಿಗೆ ದಾನಿ ಯು. ವಿಶ್ವನಾಥ ಶೆಣೈ ಟ್ಯಾಬ್‌ಗಳನ್ನು ಹಸ್ತಾಂತರಿಸಿ ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಹಾಯಧನ ಮತ್ತು ಮಾರ್ಗದರ್ಶನ ದೊಡ್ಡ ಕೆಲಸ ಎಂದು ಹೇಳಿದರು. ಪ್ರೊ. ಕೆ. ಸದಾಶಿವ ರಾವ್ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಮಾಹಿತಿ ನೀಡಿದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯಕರ್ತ ರಾದ ಹೆಚ್.ಎನ್ ಶೃಂಗೇಶ್ವರ, ಎ. ನಟರಾಜ ಉಪಾಧ್ಯ, ವರುಣ್ ಮಧ್ಯಸ್ಥ, ಅಶೋಕ್ ಎಂ, ಮಂಜುನಾಥ ಉಪಸ್ಥಿತರಿದ್ದರು. ಪ್ರೊ. ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News