ಸಚಿವ ಸ್ಥಾನ ಕೇಳಿಲ್ಲ, ಅವರು ಕೊಟ್ಟಿಲ್ಲ: ಹಾಲಾಡಿ
Update: 2021-01-16 16:05 GMT
ಕುಂದಾಪುರ, ಜ.16: ‘ನಾನು ಈವರೆಗೆ ಸಚಿವ ಸ್ಥಾನ ನೀಡಿ ಎಂದು ಕೇಳಿಲ್ಲ. ಅವರು ಕೊಟ್ಟಿಲ್ಲ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜ್ಯ ಸರಕಾರದ ಸಂಪುಟ ವಿಸ್ತರಣೆಯ ಕುರಿತು ಪ್ರತಿಕ್ರಿಯಿಸಿದ್ದಾರೆ.
ಐದು ಬಾರಿ ಶಾಸಕರಾದರೂ ಸಚಿವ ಸ್ಥಾನ ನೀಡದಿರುವ ಬಗ್ಗೆ ನಿಮಗೆ ಅಸಮಾಧಾನ ಇದೆಯೇ ಎಂದು ಶನಿವಾರ ಕುಂದಾಪುರ ದಲ್ಲಿ ಮಾಧ್ಯಮ ವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ರೀತಿಯ ಅಸಮಾಧಾನ ವಿಲ್ಲ. ನಾನು ಸಮಾಧಾನವಾಗಿಯೇ ಇದ್ದೇನೆ. ಸಚಿವ ಸ್ಥಾನ ನೀಡುವುದು, ಬಿಡುವುದು ಮುಖ್ಯಮಂತ್ರಿ, ಹೈಕಮಾಂಡ್ ಅವರ ಪರಮಾಧಿಕಾರ ಎಂದರು.