ವೇದಿಕೆಯಲ್ಲಿ ಸರಸ್ವತಿ ಪೂಜೆಗೆ ವಿರೋಧ : ಪ್ರಶಸ್ತಿ ತಿರಸ್ಕರಿಸಿದ ಸಾಹಿತಿ ಯಶವಂತ್ ಮನೋಹರ್

Update: 2021-01-17 03:47 GMT

ಮುಂಬೈ: ವೇದಿಕೆಯಲ್ಲಿ ಸರಸ್ವತಿ ಪೂಜೆ ನೆರವೇರಿಸಿ, ಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದನ್ನು ಪ್ರತಿಭಟಿಸಿದ ಹಿರಿಯ ಮರಾಠಿ ಕವಿ ಯಶವಂತ್ ಮನೋಹರ್ ಅವರು 'ವಿದರ್ಭ ಸಾಹಿತ್ಯ ಸಂಘ' ನೀಡಿದ ಜೀವಮಾನ ಸಾಧನೆ ಪ್ರಶಸ್ತಿಯನ್ನು ತಿರಸ್ಕರಿಸಿದ ಅಪರೂಪದ ಘಟನೆ ವರದಿಯಾಗಿದೆ.

ವಿದರ್ಭ ಸಾಹಿತ್ಯ ಸಂಘಕ್ಕೆ ಈ ಕುರಿತು ಪತ್ರ ಬರೆದಿರುವ ಅವರು, "ದೇವತೆಯ ಭಾವಚಿತ್ರ, ಮಹಿಳೆಯರು ಹಾಗೂ ಶೂದ್ರರನ್ನು ಶಿಕ್ಷಣ ಮತ್ತು ಜ್ಞಾನ ಪಡೆಯದಂತೆ ತಡೆಯುವ ಸಂಕೇತ. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಧಾರ್ಮಿಕತೆಯನ್ನು ನಾನು ಒಪ್ಪುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಬರಹಗಾರನಾಗಿ ನನ್ನ ಪಾತ್ರ ಮತ್ತು ನನ್ನ ಯೋಚನೆಗಳ ಬಗ್ಗೆ ವಿದರ್ಭ ಸಾಹಿತ್ಯ ಸಂಘಕ್ಕೆ ಅರಿವು ಇದೆ ಎಂದು ನಾನು ಭಾವಿಸಿದ್ದೇನೆ. ಸರಸ್ವತಿ ದೇವಿಯ ಚಿತ್ರ ಇರುತ್ತದೆ ಎಂದು ನನಗೆ ಹೇಳಲಾಗಿದೆ. ನನ್ನ ಮೌಲ್ಯಗಳನ್ನು ಕಡೆಗಣಿಸಿ ನಾನು ಪ್ರಶಸ್ತಿ ಸ್ವೀಕರಿಸಲಾರೆ. ವಿನಯದಿಂದ ಈ ಪ್ರಶಸ್ತಿಯನ್ನು ನಿರಾಕರಿಸುತ್ತೇನೆ" ಎಂದು ನಾಗ್ಪುರದ ಸಾಹಿತಿ ಹೇಳಿದ್ದಾಗಿ freepressjournal.com ವರದಿ ಮಾಡಿದೆ.

ವಿಎಸ್‌ಎಸ್‌ನಿಂದ ಯಾರಾದರೂ ಸಂಪರ್ಕಿಸಿ ಚರ್ಚಿಸಿದ್ದರೆ ಒಂದು ಪರಿಹಾರ ಕಂಡುಹಿಡಿಯಬಹುದಿತ್ತು. ಆದರೆ ಅದು ಆಗಲಿಲ್ಲ ಎಂದು ವಿವರಿಸಿದ್ದಾರೆ. ಸರಸ್ವತಿ ದೇವರ ಫೋಟೊ ಇಡುವ ಬದಲು ಎಲ್ಲ ಸಾಹಿತ್ಯಿಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾವಿತ್ರಿಭಾಯಿ ಪುಲೆ ಅವರ ಭಾವಚಿತ್ರ ಮತ್ತು ಸಂವಿಧಾನದ ಪ್ರತಿಯನ್ನು ಇಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಎಲ್ಲ ಕಲಾವಿದರು, ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಕೋರುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News