ಕಂಕನಾಡಿ; ಬಸ್-ಲಾರಿ‌ ಮಧ್ಯೆ ಅಪಘಾತ: ಪ್ರಯಾಣಿಕರಿಗೆ ಗಾಯ

Update: 2021-01-17 03:50 GMT

ಮಂಗಳೂರು, ಜ.17: ನಗರದ ಕಂಕನಾಡಿ ಜಂಕ್ಷನ್ ಬಳಿ ಬಸ್ ಮತ್ತು ಲಾರಿಯ ಮಧ್ಯೆ ರವಿವಾರ ಬೆಳಗ್ಗೆ ಅಪಘಾತ ಸಂಭವಿಸಿದೆ.

ಸುರತ್ಕಲ್ ಕಡೆಯಿಂದ ಮಂಗಳಾದೇವಿ ಕಡೆಗೆ ಹೋಗುತ್ತಿದ್ದ ಬಸ್ ಮತ್ತು ಪಂಪ್‌ವೆಲ್ ಒಳರಸ್ತೆಯಾಗಿ ಕಂಕನಾಡಿಯತ್ತ ಬರುತ್ತಿದ್ದ ಲಾರಿಯ ಮಧ್ಯೆ ಬೆಳಗ್ಗೆ ಅಪಘಾತ ಸಂಭವಿಸಿದೆ. ಇದರಿಂದ ಚಾಲಕ ಮತ್ತು  ಪ್ರಯಾಣಿಕರಿಗೆ ಗಾಯವಾಗಿದೆ.

ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News