ಕಾಪು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಡಾ.ಭರತ್ ‌ಕುಮಾರ್ ಪೊಲಿಪು

Update: 2021-01-17 15:13 GMT

ಕಾಪು, ಜ.17: ಪಡುಬಿದ್ರೆ ಶ್ರೀಮಹಾಲಿಂಗೇಶ್ವರ ಶ್ರೀಮಹಾಗಣಪತಿ ದೇವಳದ ಪ್ರಾಂಗಣದಲ್ಲಿ ಜ.29 ನಡೆಯಲಿರುವ ಕಾಪು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ರಂಗಕರ್ಮಿ, ಲೇಖಕ ಡಾ.ಭರತ್‌ ಕುಮಾರ್ ಪೊಲಿಪು ಆಯ್ಕೆಯಾಗಿದ್ದಾರೆ.

ಮೂಲತ: ಕಾಪು ತಾಲೂಕಿನ ಪೊಲಿಪುನವರಾಗಿದ್ದು, ಮುಂಬಯಿ ಕನ್ನಡ ರಂಗಭೂಮಿ-ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ಕಳೆದ 30ವರ್ಷಗಳಿಂದ ಮುಂಬಯಿ ರಂಗಭೂಮಿಯಲ್ಲಿ ಸೃಜನಶೀಲ ನಿರ್ದೇಶಕ ರಾಗಿದ್ದಾರೆ. ಇವರ ನಾಟಕಗಳು ಮಹಾರಾಷ್ಟ್ರವಲ್ಲದೆ ಕರ್ನಾಟಕದ ವಿವಿಧ ಬಾಗಗಳಲ್ಲಿ ಪ್ರದರ್ಶನಗೊಂಡು, ಹಲವಾರು ಪ್ರಶಸ್ತಿ ಪಡೆದುಕೊಂಡಿವೆ.

ಇತ್ತೀಚೆಗೆ ಕರ್ನಾಟಕ ನಾಟಕ ಅಕಾಡೆಮಿಯ ಪೆಲೋಶಿಪ್ ಇವರಿಗೆ ಲಭಿಸಿದ್ದು, ಸಮಾಜಸೇವೆ, ಸಂಘಟನೆ, ರಂಗ ನಿರ್ದೇಶನ ವನ್ನು ಹವ್ಯಾಸವಾಗಿ ಬೆಳೆಸಿಕೊಂಡಿರುವ ಇವರು ಮುಂಬಯಿ ಮೊಗವೀರ ಬ್ಯಾಂಕ್‌ನಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News