ಶಾಸಕ ಭರತ್ ಶೆಟ್ಟಿ ನೇತ್ರದಾನಕ್ಕೆ ಸಹಿ

Update: 2021-01-17 16:08 GMT

ಮಂಗಳೂರು, ಜ.17: ದ.ಕ. ಜಿಲ್ಲಾ ಗೃಹ ರಕ್ಷಕ ದಳ ಹಾಗೂ ಜಿಲ್ಲಾ ಪೌರ ರಕ್ಷಣಾ ಪಡೆ, ಲಯನ್ಸ್ ಕ್ಲಬ್ ಮಂಗಳೂರು, ಮಾನವ ಹಕ್ಕುಗಳ ಮಹಾಮೈತ್ರಿ ಇದರ ಸಂಯುಕ್ತ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯದ ಸಹಯೋಗದೊಂದಿಗೆ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರದಾನ ಅಭಿಯಾನವು ರವಿವಾರ ಮೇರಿಹಿಲ್‌ನಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ ತಮ್ಮ ಕಣ್ಣುಗಳನ್ನು ದಾನ ಮಾಡುವ ಒಪ್ಪಂದ ಪತ್ರಕ್ಕೆ ಸಹಿ ಹಾಕಿ ಗಮನ ಸೆಳೆದರು. ಮರಣದ ನಂತರ ವ್ಯರ್ಥವಾಗಿ ಹೋಗುವ ಕಣ್ಣುಗಳನ್ನು ನಿರ್ದಿಷ್ಟ ಅವಧಿಯೊಳಗೆ ಅಗತ್ಯವಿದ್ದವರಿಗೆ ಅಳವಡಿ ಸುವ ಮೂಲಕ ಈ ಸುಂದರ ಪ್ರಪಂಚವನ್ನು ಬೇರೆಯವರು ಕೂಡ ನೋಡುವಂತಾಗಲಿ ಎಂದು ಭರತ್ ಶೆಟ್ಟಿ ಹೇಳಿದರು.

ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ. ಮುರಳಿ ಮೋಹನ್ ಚೂಂತಾರು, ಲಯನ್ ಉಮೇಶ್ ಪ್ರಭು, ಕೃಷ್ಣಾನಂದ ಪೈ, ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News