ಪುತ್ರಿಯ ವಿರುದ್ಧ ದೂರು ನೀಡಿದ ತಂದೆ

Update: 2021-01-17 17:04 GMT

ಬೆಂಗಳೂರು, ಜ.17: ಕೊಟ್ಟ ಹಣ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಕೊಠಡಿಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆಂದು ಆರೋಪಿಸಿ ಪುತ್ರಿಯ ವಿರುದ್ಧ ತಂದೆ ಇಲ್ಲಿನ ನಂದಿನಿ ಲೇಔಟ್ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

ಬನಶಂಕರಿಯ ಮುನಿವೆಂಕಟರಾಮ (68) ನೀಡಿದ ದೂರಿನ ಆಧಾರದ ಮೇಲೆ ನಂದಿನಿ ಲೇಔಟ್ ಠಾಣೆ ಪೊಲೀಸರು ಪುತ್ರಿ ಗಂಗಾವತಿ ಹಾಗೂ ಆಳಿಯ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುನಿವೆಂಕಟರಾಮ ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಅವರ ಪುತ್ರಿ ಗಂಗಾವತಿ ಇಲ್ಲಿನ ನಂದಿನಿ ಲೇಔಟ್‍ ನಲ್ಲಿ ನೆಲೆಸಿರುವ ಮನೆಗೆ ಕರೆದುಕೊಂಡು ಬಂದಿದ್ದಳು. ತುರ್ತು ಹಣ ಬೇಕೆಂದು ಹೇಳಿ ಚಿನ್ನಾಭರಣ, 4.65 ಲಕ್ಷ ರೂ. ನಗದು ಪಡೆದಿದ್ದಾರೆ. ಆದರೆ, ಮುನಿವೆಂಕಟರಾಮ ಹಣ ಹಿಂತಿರುಗಿಸುವಂತೆ ಹೇಳಿದ್ದರು. 

ಇದರಿಂದ ಅಕ್ರೋಶಗೊಂಡ ಗಂಗಾವತಿ, ಪತಿಯೊಂದಿಗೆ ಸೇರಿ ಹಲ್ಲೆ ನಡೆಸಿ ಕೊಠಡಿಯಲ್ಲಿ 5 ದಿನ ಕೂಡಿ ಹಾಕಿ ಚಿತ್ರ ಹಿಂಸೆ ಕೊಟ್ಟಿದ್ದಾಳೆ ಎಂದು ದೂರಿನಲ್ಲಿ ಮುನಿವೆಂಕಟರಾಮ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News