ಕಿಲ್ಲೂರು: ಸುನ್ನತ್ ಕಾರ್ಯಕ್ರಮ, ರಕ್ತದಾನ ಶಿಬಿರ

Update: 2021-01-18 09:48 GMT

ಬೆಳ್ತಂಗಡಿ, ಜ.18: ತಾಜುಲ್ ಉಲಮಾ ರಿಲೀಫ್ ಕಮಿಟಿ, ದಕ್ಷಿಣ ಕನ್ನಡ ಇದರ ವತಿಯಿಂದ ಹಮ್ಮಿಕೊಂಡಿರುವ ಉಚಿತ ಸುನ್ನತ್(ಮುಂಜಿ) ಅಭಿಯಾನದ ದ್ವಿತೀಯ ಶಿಬಿರ ಹಾಗೂ ಲೇಡಿಗೋಶನ್ ಆಸ್ಪತ್ರೆ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ  ಸಹಕಾರದೊಂದಿಗೆ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಬ್ಲಡ್ ಸೈಬೋ ವತಿಯಿಂದ 216ನೇ  ರಕ್ತದಾನ ಶಿಬಿರವು ಕಿಲ್ಲೂರು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ರವಿವಾರ ನಡೆಯಿತು.

ಕಿಲ್ಲೂರು ಮಸ್ಜಿದ್ ಅಧ್ಯಕ್ಷ ಎಂ.ಮುಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಅಝೀಝ್ ಝುಹರಿ ಕಿಲ್ಲೂರು ಪ್ರಾಸ್ತಾವಿಕ ಬಾಷಣ ಮಾಡಿ ತಾಜುಲ್ ಉಲಮಾ ರಿಲೀಫ್ ಕಮಿಟಿಯನ್ನು ಪರಿಚಯಿಸಿದರು.  ಜಮಾಅತ್ ಕಾರ್ಯದರ್ಶಿ ಅಲ್ಹಾಜ್  ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕುಂತೂರು, ಇಸ್ಮಾಯೀಲ್ ಫೈಝಿ ಕಿಲ್ಲೂರು, ರಿಲೀಫ್ ಕಮಿಟಿಯ ಸಲಹೆಗಾರರಾದ ಮಡಂತ್ಯಾರ್ ಸಖಾಫಿ ಮಾತನಾಡಿ ಶುಭ ಹಾರೈಸಿದರು.

ಹಮೀದ್ ಫೈಝಿ ಕಿಲ್ಲೂರು ‘ಸಮಾಜ ಸೇವೆ  ಮತ್ತು  ಸಮುದಾಯದ ಯುವ ಸಮೂಹ’ ಎಂಬ ವಿಷಯಯ ಬಗ್ಗೆ ಮುಖ್ಯ ಭಾಷಣ ಮಾಡಿದರು. 

ಇದೇ ಸಂದರ್ಭ ತಾಜುಲ್ ಉಲಮಾ ರಿಲೀಫ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ವಗ್ಗ, ಕಾರ್ಯದರ್ಶಿ ರಾಝಿಕ್ ಸಾಲೆತ್ತೂರು,  ಕಾರ್ಯನಿರ್ವಾಹಕರಾದ ಅಬ್ದುಲ್ ಅಝೀಝ್ ಝುಹರಿ ಕಿಲ್ಲೂರು, ರಶೀದ್  ಝುಹರಿ ಕುಲಾಲ್, ಸಿದ್ದೀಕ್ ಕೊಳಕೆ ಹಾಗೂ ಎಂಎನ್ ಜಿ ಫೌಂಡೇಶನ್  ಕಾರ್ಯನಿರ್ವಾಹಕ ಮನ್ಸೂರ್  ಬಿ.ಸಿ.ರೋಡ್ ಅವರನ್ನು ರಿಲೀಫ್ ವತಿಯಿಂದ  ಸನ್ಮಾನಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಕಿಲ್ಲೂರು ಜಮಾಅತ್ ಉಪಾಧ್ಯಕ್ಷ ಅಬೂಬಕರ್ ಮಲ್ಲಿಗೆ  ಮಿತ್ತಬಾಗಿಲು ಗ್ರಾಮ ಪಂಚಾಯತ್ ಸದಸ್ಯ ಶಾಹುಲ್ ಹಮೀದ್ ಕಿಲ್ಲೂರು, ಎಸ್ಸೆಸ್ಸೆಫ್ ಡಿವಿಷನ್ ಕೋಶಾಧಿಕಾರಿ ಝಮೀರ್ ಸಅದಿ ಬೆದ್ರಬೆಟ್ಟು, ಬ್ಲಡ್ ಸೈಬೋ ಉಸ್ತುವಾರಿ ಕರೀಂ ಕದ್ಕರ್, ತಾಜುಲ್ ಉಲಮಾ ಪೆರ್ಡಾಡಿ ಮಸ್ಜಿದ್ ಅಧ್ಯಕ್ಷ ಸುಲೈಮಾನ್ ಕೊಲ್ಲಿಬೆಟ್ಟು, ರಿಫಾಯಿಯ್ಯಾ ಮದ್ರಸ ಬೆದ್ರಬೆಟ್ಟು ಇದರ ಅಧ್ಯಕ್ಷ ಉಮರ್ ಕೊಳಂಬೆ, ಎಸ್ ವೈಎಸ್ ನಾಯಕರಾದ ನಝೀರ್ ಪೆರ್ಡಾಡಿ, ಜಿಸಿಸಿ ಕಿಲ್ಲೂರು ಯುನಿಟ್ ಕೋಶಾಧಿಕಾರಿ ಬದ್ರುದ್ದೀನ್ ಕಿಲ್ಲೂರು, ಕುಕ್ಕಾವು ಮದ್ರಸ ಸದರ್ ಉಸ್ತಾದ್ ಝಕರಿಯ ಹನೀಫಿ ಬೆದ್ರಬೆಟ್ಟು ಹಾಗೂ ಎಸ್ಸೆಸ್ಸೆಫ್ ಬೆಳ್ತಂಗಡಿ ಸೆಕ್ಟರ್, ಡಿವಿಷನ್ ನ ನಾಯಕರು ಉಪಸ್ಥಿತರಿದ್ದರು. 

ಕಿಲ್ಲೂರು ಎಸ್ಸೆಸ್ಸೆಫ್ ಯುನಿಟ್ ಕಾರ್ಯದರ್ಶಿ ಅಲ್ತಾಫ್ ಸ್ವಾಗತಿಸಿ, ವಂದಿಸಿದರು.

38 ಮಕ್ಕಳು ಸುನ್ನತ್ ಶಿಬಿರದ ಫಲಾನುಭವಿಗಳಾದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News