ಮಮತಾ ವಾಣಿ ರಾವ್ ಚೊಚ್ಚಲ ಹನಿಗವನ ಸಂಕಲನ ‘ತುಡಿತ’ ಬಿಡುಗಡೆ

Update: 2021-01-18 10:01 GMT

ಮಂಗಳೂರು, ಜ.18: ಅಮೃತ ಪ್ರಕಾಶ ಪತ್ರಿಕೆಯ ವತಿಯಿಂದ ಹಮ್ಮಿಕೊಂಡಿರುವ ಸರಣಿ ಕೃತಿ ಬಿಡುಗಡೆ  ಕಾರ್ಯಕ್ರಮದ ಅಂಗವಾಗಿ  29ನೇ ಕೃತಿ ಮಮತಾ ವಾಣಿ  ರಾವ್, ಮಂಜೇಶ್ವರ ಅವರ ಚೊಚ್ಚಲ ಹನಿಗವನ ಸಂಕಲನ ‘ತುಡಿತ’  ಇ೦ದು ಮಂಗಳೂರು ಪತ್ರಿಕಾ ಭವನದಲ್ಲಿ ಬಿಡುಗಡೆಗೊಂಡಿತು.

ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ವಿಜೇತೆ, ಶುಶ್ರೂಷಕ ಅಧಿಕಾರಿ ಕವಯಿತ್ರಿ  ಸುಭಾಷಿಣಿ ಬೆಳ್ತಂಗಡಿ ಅವರು ಕೃತಿ ಬಿಡುಗಡೆ ಮಾಡಿದರು. ಧರ್ಮದರ್ಶಿ  ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
 ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ.ಮಾಲತಿ ಶೆಟ್ಟಿ ಮಾಣೂರು, ಅಮೃತ ಪ್ರಕಾಶ ಪತ್ರಿಕೆಯ ಉಪಸಂಪಾದಕ ಡಾ.ಕಾಸರಗೋಡು ಅಶೋಕ್ ಕುಮಾರ್ ಹಾಗೂ ಕವಯಿತ್ರಿ ಮಮತಾ ವಾಣಿ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News