ಜ.19: ‘ಪಡಿ’ಯಲ್ಲಿ ಕಾರ್ಯಾಗಾರ

Update: 2021-01-18 17:08 GMT

ಮಂಗಳೂರು, ಜ.18: ನಗರದ ‘ಪಡಿ’ಸಂಸ್ಥೆಯ ವತಿಯಿಂದ ಪದುವಾ ಹೈಸ್ಕೂಲ್ ಬಳಿಯಿರುವ ಸಿಒಡಿಪಿ-ಐಎಸ್‌ಡಿ ಹಾಲ್‌ನಲ್ಲಿ ‘ಜನಸಮುದಾಯದ ಧ್ವನಿಗಾಗಿ ವಕೀಲಿ ಕ್ರಮಗಳು’ ಎಂಬ ವಿಚಾರದ ಬಗ್ಗೆ ಕಾರ್ಯಾಗಾರವು ಜ.19ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ.

ರಾಜ್ಯ ಮಕ್ಕಳ ಹಕ್ಕುಗಳ ಅಯೋಗದ ಮಾಜಿ ಸದಸ್ಯ ವಾಸುದೇವ ಶರ್ಮಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕ ಡಾ. ರೀಟಾ ನೊರೋನ್ಹಾ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News