ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವಾರ್ಷಿಕ ಕೌನ್ಸಿಲ್ - ನೂತನ ಪದಾಧಿಕಾರಿಗಳ ಆಯ್ಕೆ

Update: 2021-01-19 16:10 GMT

ಮಂಗಳೂರು, ಜ.19: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿಯ ವಾರ್ಷಿಕ ಕೌನ್ಸಿಲ್ ಮಹಾಸಭೆ ಜ.17 ರಂದು ನೆಕ್ಕಿಲ ಮದ್ರಸಾ ಹಾಲ್‌ನಲ್ಲಿ ಡಿವಿಷನ್ ಸಮಿತಿ ಅಧ್ಯಕ್ಷ ಜಿ.ಕೆ ಇಬ್ರಾಹೀಂ ಅಂಜದಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಎಸ್ಸೆಸ್ಸೆಫ್ ದ.ಕ. ಈಸ್ಟ್ ರೆನ್ ಸದಸ್ಯ ಜುನೈದ್ ಸಖಾಫಿ ಜೀರ್ಮುಖಿ ದುಆ ನೆರವೇರಿಸಿದರು. ಎಸ್‌ಎಂಎ ಸುಳ್ಯ ರೀಜನಲ್ ಪ್ರ. ಕಾರ್ಯದರ್ಶಿ ಲತೀಫ್ ಸಖಾಫಿ ಗೂನಡ್ಕ ಉದ್ಘಾಟಿಸಿದರು. ನೆಕ್ಕಿಲ ಜುಮಾ ಮಸ್ಜಿದ್ ಮುದರ್ರಿಸ್ ಝಿಯಾದ್ ಸಖಾಫಿ ಬಾರೆಬೆಟ್ಟು ಸಂಘಟನಾ ತರಬೇತಿ ನಡೆಸಿದರು. 

ವೀಕ್ಷಕರಾಗಿ ಆಗಮಿಸಿದ ಎಸ್ಸೆಸ್ಸೆಫ್ ದ.ಕ. ಈಸ್ಟ್ ರೆನ್ ಸದಸ್ಯ ಅಬ್ದುರ್ರಹ್ಮಾನ್ ಪದ್ಮುಂಜ ಕೌನ್ಸಿಲ್ ನಿಯಂತ್ರಿಸಿದರು. ಪ್ರ.ಕಾರ್ಯದರ್ಶಿ ಸಿರಾಜುದ್ದೀನ್ ಹಿಮಮಿ ಕುಂಭಕ್ಕೋಡು ವರದಿ ಹಾಗೂ ಕೋಶಾಧಿಕಾರಿ ಹಸೈನಾರ್ ನೆಕ್ಕಿಲ ಲೆಕ್ಕ ಪತ್ರ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಕೆಸಿಎಫ್ ಅಬುಧಾಬಿ ಝೋನ್ ಅಧ್ಯಕ್ಷ ಹಸೈನಾರ್ ಅಮಾನಿ, ಎಸ್‌ವೈಎಸ್ ದ.ಕ. ಈಸ್ಟ್ ಜಿಲ್ಲಾ ಸದಸ್ಯ ಸಿದ್ದೀಕ್ ಕಟ್ಟೆಕಾರ್, ಎಸ್‌ವೈಎಸ್ ನೆಕ್ಕಿಲ ಬ್ರಾಂಚ್ ಅಧ್ಯಕ್ಷ ರಫೀಕ್, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಕಾರ್ಯದರ್ಶಿ ಎ.ಬಿ. ಅಬ್ಬಾಸ್ ಹಾಗೂ ನೆಕ್ಕಿಲ ಜಮಾಅತ್ ನಾಯಕರು ಉಪಸ್ಥಿತರಿದ್ದರು.
ಇದೇ ಸಂದರ್ಭ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಎ.ಎಂ.ಫೈಝಲ್ ಝುಹ್’ರಿ ಕಲ್ಲುಗುಂಡಿ, ಪ್ರ. ಕಾರ್ಯದರ್ಶಿಯಾಗಿ ಹಸೈನಾರ್ ನೆಕ್ಕಿಲ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ, ಉಪಾಧ್ಯಕ್ಷರಾಗಿ ಸಿರಾಜ್ ಹಿಮಮಿ ಕುಂಭಕ್ಕೋಡು, ಜುನೈದ್ ಸಖಾಫಿ ಜೀರ್ಮುಖಿ ಯವರನ್ನೂ, ಕಾರ್ಯದರ್ಶಿಗಳಾಗಿ ಖಲೀಲ್ ಝುಹ್ರಿ, ನೌಶಾದ್ ಕೆರೆಮೂಲೆ, ಸ್ವಬಾಹ್ ಹಿಮಮಿ, ಸ್ವಾದಿಖ್ ಕಲ್ಲುಗುಂಡಿ, ಕಲಾಂ ಝುಹ್ರಿ, ಶಮೀರ್ ಡಿ.ಎಚ್ ರವರೊಂದಿಗೆ 14 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.

ಪ್ರ. ಕಾರ್ಯದರ್ಶಿ ಸಿರಾಜ್ ಹಿಮಮಿ ಸ್ವಾಗತಿಸಿದರು. ನೂತನ ಪ್ರ. ಕಾರ್ಯದರ್ಶಿ ಹಸೈನಾರ್ ನೆಕ್ಕಿಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News