ಜ.22ರಿಂದ ಶ್ರೀವಾಣಿ ಯಕ್ಷಗಾನ ಸಭಾ ಯುವಕ ಮಂಡಲದ ಸುವರ್ಣ ಮಹೋತ್ಸವ

Update: 2021-01-19 18:10 GMT

ಕಾರ್ಕಳ : ರಾಜ್ಯ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ ಸಾಣೂರು ಇದರ ಅಂಗಸಂಸ್ಥೆ ಶ್ರೀ ವಾಣಿ ಯಕ್ಷಗಾನ ಸಭಾ ಯುವಕ ಮಂಡಲ ಸಾಣೂರು ಇದರ ಸುವರ್ಣ ಮಹೋತ್ಸವ ಸಂಭ್ರಮ ಹಾಗೂ ಯುವಕ ಮಂಡಲದ 67ನೇ ವಾರ್ಷಿಕೋತ್ಸವ ಸಂಭ್ರಮ ಜ.22ರಿಂದ 24ರ ತನಕ ಸಾಣುರಿನ  ಪಟೇಲ್ ಮುದ್ದಣ್ಣ  ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ  ವಿವಿಧ ಕಾರ್ಯಕ್ರಮಗಳೊಂದಿಗೆ  ನಡೆಯಲಿದೆ ಎಂದು ಯುವಕ ಮಂಡಲದ ಅಧ್ಯಕ್ಷ  ಪ್ರಸಾದ್ ಪೂಜಾರಿ ಹಾಗೂ  ಪ್ರ. ಕಾರ್ಯದರ್ಶಿ ಮೋಹನ್ ಶೆಟ್ಟಿ  ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿ  ನಡೆಸಿದ ಅವರು  ಯುವಕ ಮಂಡಲವು  ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ   ಚಟುವಟಿಕೆಗಳನ್ನು  ಕಳೆದ  67 ವರ್ಷಗಳಿಂದ ಹಮ್ಮಿಕೊಳ್ಳುತ್ತ ಬಂದಿದೆ.  ಶ್ರೀ ವಾಣಿ ಯಕ್ಷಗಾನ ಸಭಾ  ಸ್ಥಾಪಿಸುವ ಮೂಲಕ ಕಲೆಯ  ಆರಾಧನೆಗೂ ಕೊಡುಗೆ  ನೀಡಿದೆ. ಯಕ್ಷಗಾನ ಸಭಾ 50 ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ  ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮತ್ತು ಯುವಕ ಮಂಡಲದ 67 ವಾರ್ಷಿಕೋತ್ಸವ ಕೂಡ  ಆಚರಿಸಿಕೊಳ್ಳುತ್ತಿದ್ದೇವೆ ಎಂದರು.

ಸುವರ್ಣ ಮಹೋತ್ಸವ ಅಧ್ಯಕ್ಷ  ಶ್ಯಾಮ ಶೆಟ್ಟಿ  ಸಾಣೂರು, ಪ್ರ.ಕಾರ್ಯದರ್ಶಿ ಸುಧಾಕರ ಶೆಟ್ಟಿ  ಶರಣ್ಯ ಸಾಣುರು,  ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಪ್ರಕಾಶ್ ರಾವ್, ಪ್ರಮೀತ್ ಸುವರ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಹಾಸ ಪೂಜಾರಿ, ಕೋಶಾಧಿಕಾರಿ ರಾಜೇಶ್, ಗೌರವ ಸಲಹೆಗಾರರಾದ ರಘುರಾಮ ಶೆಟ್ಟಿ,  ಶಂಕರ ಶೆಟ್ಟಿ,  ಪ್ರಕಾಶ ಮಡಿವಾಳ, ಸೀತಾರಾಮ, ಗಣೇಶ್ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News