ಸುರತ್ಕಲ್: ರೈತ ಕೇಂದ್ರ ಉದ್ಘಾಟನೆ, ರೈತರಿಗೆ ಸವಲತ್ತು ವಿತರಣೆ

Update: 2021-01-20 05:24 GMT

ಸುರತ್ಕಲ್, ಜ.20: ಸುರತ್ಕಲ್ ನಲ್ಲಿ ನೂತನ ರೈತ ಕೇಂದ್ರವನ್ನು ಶಾಸಕ ಡಾ.ಭರತ್ ಶೆಟ್ಟಿ ವೈ. ಬುಧವಾರ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಕೊರೋನ ಹಾವಳಿಯಿಂದ ನಗರಕ್ಕೆ ಸಣ್ಣಪುಟ್ಟ ಕೆಲಸ ಹುಡುಕಿಕೊಂಡು ಹೋದ ಯುವ ಸಮೂಹ ಇದೀಗ ಊರಿಗೆ ಮರಳಿ ಮತ್ತೆ ಕೃಷಿ ಚಟುವಟಿಕೆಯತ್ತಾ ಮುಖ ಮಾಡಿದೆ. ಕೃಷಿಯನ್ನು ಉತ್ತೇಜಿಸಲು,ಯುವಕರಿಗೆ ಪ್ರೋತ್ಸಾಹ ನೀಡಲು ಇದು ಸುಸಂದರ್ಭ ಎಂದರು.

ದ.ಕ. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ರೈತ ಕೇಂದ್ರಗಳನ್ನು ಗ್ರಾಮೀಣ ಭಾಗದಲ್ಲೂ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಉಪಾಧ್ಯಕ್ಷೆ ರಜನಿ ದುಗ್ಗಣ್ಣ, ತಾಲೂಕು ಪಂಚಾಯತ್ ಸದಸ್ಯರಾದ ಶಶಿಕಲಾ ಶೆಟ್ಟಿ, ಪ್ರತಿಭಾ ಶೆಟ್ಟಿ, ಕಾರ್ಪೊರೇಟರ್ ಗಳಾದ ನಯನಾ ಆರ್. ಕೋಟ್ಯಾನ್, ವರುಣ್ ಚೌಟ, ಸುರತ್ಕಲ್ ವ್ಯವಸಾಯ ಬ್ಯಾಂಕಿನ ಅಧ್ಯಕ್ಷ ಅಶೋಕ್ ಶೆಟ್ಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ, ಸಹಾಯಕ ಕೃಷಿ ನಿರ್ದೇಶಕಿ ವೀಣಾ, ಉಪಕೃಷಿ ನಿರ್ದೇಶಕ ಬಾನು ಪ್ರಕಾಶ್, ಸಹಾಯಕ ಕೃಷಿ ಅಧಿಕಾರಿ ಬಶೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News