ಮಲಯಾಳ ಚಿತ್ರ ನಟ ಉನ್ನಿಕೃಷ್ಣನ್ ನಂಬೂದಿರಿ ನಿಧನ

Update: 2021-01-20 17:36 GMT

ಮಂಜೇಶ್ವರ /ಕಣ್ಣೂರು: ಮಲಯಾಳ ಚಲನಚಿತ್ರದ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ (98) ಬುಧವಾರ ಸಂಜೆ ನಿಧನರಾದರು. ವೃದ್ಧಾಪ್ಯ ಮತ್ತು ಸಹಜ ಅನಾರೋಗ್ಯದಿಂದ ಕಳೆದೊಂದು ದಶಕದಿಂದ ಅವರು ಚಿತ್ರರಂಗದಿಂದ ದೂರವಿದ್ದರು.

ಖ್ಯಾತ ನಿರ್ದೇಶಕ ಕೆದಪ್ರಂ ದಾಮೋದರನ್ ನಂಬೂದಿರಿ ಅವರ ಮಾವ (ಪತ್ನಿಯ ತಂದೆ) ಇವರಾಗಿದ್ದು, ದೇಶಿಕಾನಂ ಮತ್ತು ಕಲ್ಯಾಣರಾಮನ್ ಮುಂತಾದ ಅನೇಕ ಚಿತ್ರಗಳಲ್ಲಿ ಅಜ್ಜನ ಪಾತ್ರವನ್ನು ನಿರ್ವಹಿಸಿದ್ದರು.

ನ್ಯುಮೋನಿಯಾ ಹಿನ್ನೆಲೆಯಲ್ಲಿ  ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದಾಗ ಕೋವಿಡ್  ದೃಢಪಟ್ಟಿತ್ತು. ಉನ್ನಿಕೃಷ್ಣನ್ ಕೆಲವು ದಿನಗಳ ಚಿಕಿತ್ಸೆಯ ನಂತರ ಎರಡು ದಿನಗಳ ಹಿಂದೆ ಕೋವಿಡ್‌ನಿಂದ ಮುಕ್ತರಾಗಿ ಮರಳಿದ್ದರು. ಮತ್ತೆ ಜ್ವರ ಉಲ್ಬಣಗೊಂಡಿತ್ತು.

ಉನ್ನಿಕೃಷ್ಣನ್ ನಂಬೂದಿರಿ ತಮ್ಮ ಕಿರಿಯ ಮಗ, ಹೈಕೋರ್ಟ್ ನ್ಯಾಯಾಧೀಶ ಪಿ.ವಿ.ಕುಂಞ್ಞಿ ಕೃಷ್ಣನ್ ಅವರೊಂದಿಗೆ ವಡುತಲದಲ್ಲಿರುವ ತಮ್ಮ ಮನೆಯಲ್ಲಿ ನೆಲಸಿದ್ದರು. ದೇಶದಾನಂ, ಕಲ್ಯಾಣರಾಮನ್, ಚಂದ್ರಮುಖಿ, ಪಮ್ಮಲ್ ಕೆ. 'ಸಂಬಂಧಂ' ಚಿತ್ರಗಳಲ್ಲಿ ನಟಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News