ಜ.23: ಪುತ್ತೂರಿನಲ್ಲಿ ಎನ್.ಎಸ್ .ಯು.ಐ ಪ್ರೇರಣಾ ಸಮಾವೇಶ

Update: 2021-01-21 10:36 GMT

ಮಂಗಳೂರು, ಜ.21: ಎನ್ ಎಸ್ ಯುಐ ದಕ್ಷಿಣ ಕನ್ನಡ ಘಟಕದ ವತಿಯಿಂದ ಪ್ರೇರಣಾ ಸಮಾವೇಶ ಪುತ್ತೂರಿನ ಆಶ್ಮಿ ಕಂಫರ್ಟ್ ಸಭಾಂಗಣದಲ್ಲಿ ಜ.23ರಂದು ನಡೆಯಲಿದೆ ಎಂದು ಅಧ್ಯಕ್ಷ ಸವಾದ್ ಸುಳ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿ ವಿಧಾನ ಸಭಾ ಕ್ಷೇತ್ರದ 15 ಪ್ರತಿನಿಧಿ ಗಳು ಭಾಗವಹಿ ಸಲಿದ್ದಾರೆ.ಇದೆ ಸಂದರ್ಭದಲ್ಲಿ ಎನ್ಎಸ್ ಯುಐ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಜಿಲ್ಲೆಯ ವಿದ್ಯಾರ್ಥಿ ಸಮೂಹ ಎದುರಿಸುತ್ತಿರುವ ಸಮಸ್ಯೆ ಗಳ ಬಗ್ಗೆ ಗಮನ ಸೆಳೆಯಲಾಗುವುದು. ಮುಖ್ಯ ವಾಗಿ ಶಾಲಾ ಆವರಣಗಳನ್ನು ಮಾದಕ ವ್ಯಸನ, ರ್ಯಾಗಿಂಗ್  ಮುಕ್ತ ಗೊಳಿಸುವುದು, ವಿದ್ಯಾರ್ಥಿ ವೇತನ  ಕಡಿತ ಗೊಂಡಿರುವ ಬಗ್ಗೆ, ಹಾಸ್ಟೆಲ್, ಪಿ.ಜಿ ಗಳಲ್ಲಿರುವ ವಿದ್ಯಾರ್ಥಿಗಳ ಸಮಸ್ಯೆಗಳ ಸಮಾಲೋಚನೆ ನಡೆಯಲಿದೆ. ಸಮಾ ವೇಶದಲ್ಲಿ ಎನ್ ಎಸ್ ಯುಐ ಸಂಘಟನೆಯ ಬಲವರ್ಧನೆ, ಮಾನವೀಯ ಸಂಬಂಧ, ಸಂಘಟನೆ, ನಾಯಕತ್ವ, ವ್ಯಕ್ತಿತ್ವ ವಿಕಸನದ ತರಬೇತಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಸುಧೀರ್ ಕುಮಾರ್ ಮರೋಳಿ, ನ್ಯಾಯವಾದಿ ದುರ್ಗಾ ಪ್ರಸಾದ್ ರೈ ಕುಂಬ್ರ, ಸುಹೈಲ್ ಕಂದಕ್, ಭವ್ಯ ನರಸಿಂಹ ಮೂರ್ತಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ನ ಹಿರಿಯ ಮುಖಂಡರಾದ ರಮಾನಾಥ ರೈ, ಹರೀಶ್ ಕುಮಾರ್, ಮಾಜಿ ಸಚಿವ ಯು.ಟಿ.ಖಾದರ್, ಮಾಜಿ ಶಾಸಕರು, ಪಕ್ಷ ದ ವಿವಿಧ ಘಟಕದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಢಿಯಲ್ಲಿ ಎನ್ ಎಸ್ ಯುಐ ಪದಾಧಿಕಾರಿಗಳಾದ ಅನ್ವಿತ್ ಕಟೀಲ್, ಸಿರಾಜ್, ವಿನಯ್ ಬಂಟ್ವಾಳ್, ಆಶ್ಲೇ ಪಿರೇರಾ, ಅಂಕುಶ್ ಶೆಟ್ಟಿ, ಶಫೀಕ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News