ಬೆಳ್ಳಿಪ್ಪಾಡಿ ಅಬ್ದುಲ್ಲಾ ಮುಸ್ಲಿಯಾರ್ ನಿಧನ

Update: 2021-01-21 13:36 GMT

ಕಾಸರಗೋಡು : ಧಾರ್ಮಿಕ ವಿದ್ವಾ೦ಸ ಹಾಗೂ ಸಮಸ್ತ ಕೇರಳ ಜಮಾಯತುಲ್ ಉಲಮಾ ಜಿಲ್ಲಾ ಉಪಾಧ್ಯಕ್ಷ  ಬೆಳ್ಳಿಪ್ಪಾಡಿ ಅಬ್ದುಲ್ಲ ಮುಸ್ಲಿಯಾರ್ (77)  ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಮುಹಿಮ್ಮತ್ ಹಿರಿಯ ಮುದರಿಸ್  ಆಗಿದ್ದರು.

ಪಟ್ಟಿಕ್ಕಾಡ್  ಜಾಮಿಯಾ  ನೂರಿಯಾದಿಂದ 1971ರಲ್ಲಿ  ಫೈಝಿ  ಪದವಿ ಪಡೆದ ಇವರು,  ಉಪ್ಪಿನಂಗಡಿ ಟೌನ್ ಮಸೀದಿ , ಕುಂಬೋಳ್ ಬದ್ರಿಯಾ ಜುಮಾ ಮಸೀದಿ  ಮೊದಲಾದೆಡೆ ಸೇವೆ ಸಲ್ಲಿಸಿ 2008ರಿಂದ ಮುಹಿಮ್ಮಾತುಲ್ ನಲ್ಲಿ  ಸೇವೆ ಸಲ್ಲಿಸುತ್ತಿದ್ದರು.

ಕೇರಳ - ಕರ್ನಾಟಕದಲ್ಲಿ ಮತ ಪ್ರವಚನಗಳಲ್ಲಿ ಪ್ರಮುಖರಾಗಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News