ಕಾಸರಗೋಡು : ಎರಡು ಕೆಜಿ ಅಕ್ರಮ ಚಿನ್ನಾಭರಣ ಸಹಿತ ಆರೋಪಿಗಳು ಸೆರೆ

Update: 2021-01-21 14:51 GMT

ಕಾಸರಗೋಡು : ಅಕ್ರಮವಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು ಎರಡು ಕೆಜಿ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು,  ಬೆಳಗಾವಿಯ ಇಬ್ಬರನ್ನು ಗುರುವಾರ ಬಂಧಿಸಿದ್ದಾರೆ.

ಬಂಧಿತರನ್ನು ಬೆಳಗಾವಿ ಸಹಾಪುರದ ತುಷಾರ್( 27) ಮತ್ತು ಜ್ಯೋತಿ ರಾಮ್ (23) ಎಂದು ಗುರುತಿಸಲಾಗಿದೆ. ಕಣ್ಣೂರು ಕಸ್ಟಮ್ಸ್ ಗೆ ಲಭಿಸಿದ ಖಚಿತ ಮಾಹಿತಿಯಂತೆ ಕಣ್ಣೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರನ್ನು ಪಳ್ಳಿಕೆರೆ ಟೋಲ್ ಗೇಟ್ ಬಳಿ ತಪಾಸಣೆ ನಡೆಸಿ ಅಕ್ರಮ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಣ್ಣೂರು ಕಸ್ಟಮ್ಸ್ ಸಹಾಯಕ ಆಯುಕ್ತ  ಇ.ವಿ. ವಿಕಾಸ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿದ್ದು,  ಕಾಸರಗೋಡು ಕಸ್ಟಮ್ಸ್ ಆಯುಕ್ತ  ಪಿ.ಪಿ ರಾಜೀವ್, ಸಿಬ್ಬಂದಿ ಕೆ. ಚಂದ್ರಶೇಖರ, ಕೆ.ಆನಂದ ಕೊರಕ್ಕೋಡ್, ಎಂ. ವಿಶ್ವನಾಥ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News