ಒಂದೂವರೆ ವರ್ಷಗಳ ಕಾಲ ಕೃಷಿ ಕಾಯ್ದೆಗೆ ತಡೆ: ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ ರೈತರು

Update: 2021-01-21 16:06 GMT

ಹೊಸದಿಲ್ಲಿ: ಒಂದೂವರೆ ವರ್ಷಗಳ ಕಾಲ ವಿವಾದಿತ ಕೃಷಿ ಕಾಯ್ದೆಗಳನ್ನು ತಡೆಹಿಡಿಯುವ ಕೇಂದ್ರ ಸರಕಾರ ಮುಂದಿಟ್ಟಿರುವ ಪ್ರಸ್ತಾವವನ್ನು ಪ್ರತಿಭಟನಾನಿರತ ರೈತ ಸಂಘಟನೆಗಳು ತಿರಸ್ಕರಿಸಿವೆ.

ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಸಂಪೂರ್ಣ ರದ್ದುಪಡಿಸಬೇಕೆಂದು ಸುಮಾರು ಎರಡು ತಿಂಗಳಿಂದ ಪ್ರತಿಭಟಿಸುತ್ತಿರುವ ರೈತರು ಇಂದು ಸಭೆ ಸೇರಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ರೈತರೊಂದಿಗೆ ಬುಧವಾರ ನಡೆದಿದ್ದ 10ನೇ ಸುತ್ತಿನ ಮಾತುಕತೆಯ ವೇಳೆ ಸರಕಾರವು 1.5 ವರ್ಷಗಳ ಕಾಲ ಕೃಷಿ ಕಾಯ್ದೆ ಜಾರಿಯನ್ನು ತಡೆ ಹಿಡಿಯುವ ಪ್ರಸ್ತಾವ ಮುಂದಿಟ್ಟಿತ್ತು.  ರೈತರುಗಳು ಇದಕ್ಕೆ ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News