ಅಪರಿಚಿತ ಶವ ಪತ್ತೆ

Update: 2021-01-21 16:27 GMT

ಬ್ರಹ್ಮಾವರ, ಜ.21: ಉಪ್ಪೂರು ಗ್ರಾಮದ ಕೊಳಲಗಿರಿ ಮೀನು ಮಾರ್ಕೆಟ್ ಬಳಿ ಮಾವಿನಕುದ್ರು ಸುವರ್ಣ ನದಿ ದಡದಲ್ಲಿ ಇಂದು ಅಪರಾಹ್ನ 12 ಗಂಟೆ ಸುಮಾರಿಗೆ 40ರಿಂದ 45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.

ನೀಲಿ ಬಿಳಿ ಗೆರೆಗಳಿಂದ ಕೂಡಿದ ಚೌಕುಳಿ ತುಂಬು ತೋಳಿನ ಶರ್ಟ್, ಸಿಮೆಂಟ್ ಕಲರ್ ಪ್ಯಾಂಟ್ ಅಲ್ಲದೇ ಒಳಗೆ ಕಪ್ಪು ಬಣ್ಣದ ಬಮುಡಾ ಚಡ್ಡಿ ಧರಿಸಿದ್ದಾನೆ. ದುಂಡು ಮುಖ, ತಲೆಯಲ್ಲಿ ಸ್ವಲ್ಪ ಚರ್ಮ ಕಿತ್ತುಹೋಗಿದೆ. ಐದೂವರೆ ಅಡಿ ಉತ್ತದ ಸಾಧಾರಣ ಶರೀರವಾಗಿದೆ. ಈತ 4-5 ದಿನಗಳ ಹಿಂದೆ ಎಲ್ಲಿಯೋ ಹೊಳೆಗೆ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು, ಅಥವಾ ಆತ್ಮಹತ್ಯೆ ಮಾಡಿ ಕೊಂಡಿರಬೇಕೆಂದು ಸ್ಥಳೀಯರು ಶಂಕಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News