ಮಂಗಳೂರು : ಬಿಗ್ ಬಝಾರ್ ವತಿಯಿಂದ 'ಅಭಾರ್ ಡೇ' ಕಾರ್ಯಕ್ರಮ

Update: 2021-01-22 16:57 GMT

ಮಂಗಳೂರು : ಬಿಗ್ ಬಝಾರ್ ವತಿಯಿಂದ "ಅಭಾರ್ ಡೇ" ಕಾರ್ಯಕ್ರಮ ನಡೆಯಿತು.

ಮಂಗಳೂರು ಮಹಾ ನಗರಪಾಲಿಕೆ ಹಿರಿಯ ಆರೋಗ್ಯ ನಿರಕ್ಷಕರಾದ ಶಿವಲಿಂಗಪ್ಪ ಹಾಗೂ ಮಂಗಳೂರಿನ ರೇಡಿಯೋ ಜಾಕಿ, ಪತ್ರಕರ್ತ, ಟಿವಿ ಆಂಕರ್  ಎರಲ್ ಮತ್ತು ಸಂಗೀತ ನಿರ್ದಶಕರಾದ ಜೋಯಲ್ ರೆಬೆಲ್ಲೋ, ಯುವ ಸಮಾಜ ಸೇವಕ ಸುಹನ್ ಆಳ್ವ ಅವರು ಉಪಸ್ಥಿತರಾಗಿದ್ದರು.

ಲಾಕ್ಡೌನ್ ಹಾಗೂ ಸಿಲ್ ಡೌನ್ ಸಂದರ್ಭ ಬಿಗ್ ಬಝಾರ್ ನ ಕಾರ್ಮಿಕ ಹಾಗೂ ನಿರ್ವಾಹಕ ವರ್ಗದವರು ಸುರಕ್ಷತೆಯನ್ನು ಕಾಪಾಡಿಕೊಂಡು ಮಾಡಿದಂತಹ ಹೋಂ ಡೆಲಿವರಿ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಹಕರ ಬೇಡಿಕೆಯ ಮೇರೆಗೆ ತಾಜಾ ಹಣ್ಣು, ತರಕಾರಿ ಹಾಗೂ ದಿನಸಿಯನ್ನು ತುಂಬಾ ಉತ್ಸಾಹ ಹಾಗೂ ಜವಾಬ್ದಾರಿತ ಸಮಾಜ ಸೇವೆ ಎಂದು ಪರಿಗಣನೆಗೆ ತೆಗೆದುಕೊಂಡು ಮನೆ ಮನೆಗೆ ಸರಿಯಾದ ವೇಳೆ ಮುಟ್ಟಿಸಿದಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಕನ್ನಡ, ತುಳು, ಕೊಂಕಣಿ ಸಿನಿಮಾ ನಟಿ ಸೀಮಾ ಸೇರವು ಹಾಗೂ ಬಹುಭಾಷಾ ಚಿತ್ರನಟ ದೀಪಕ್ ಪಾಲಡ್ಕ ಮತ್ತು ಆರ್ಜೆ, ಟಿವಿ ಅಂಕರ್, ಚಿತ್ರನಟ ಹಾಗೂ ಪರಿಸರ ಪ್ರೇಮಿಯಾದ ಅವಿನಾಶ್ ಕಾಮತ್ ವಿಡಿಯೋ ಮುಖಾಂತರ ಧನ್ಯವಾದ  ಸಮರ್ಪಿಸಿದರು.

ಬಿಗ್ ಬಝಾರ್ ನ ಸ್ಟೋರ್ ಕರ್ತರಾದ ಸಂದೇಶ್ ಕಿದಿಯೂರು ಅವರು  ಜ. 26ರಿಂದ 31ರವರೆಗೆ ನಡೆಯಲಿರುವ ಆಫರ್ ಬಗ್ಗೆ ಮಾಹಿತಿ ನೀಡಿ ಗ್ರಾಹಕರು ಇದರ ಸದುಪಯೋಗ ಪಡೆಯಲು ತಿಳಿಸಿ, ಹೆಚ್ಚಿನ ಮಾಹಿತಿಗಾಗಿ ಬಿಜೈ ಭಾರತ್ ಮಾಲ್ ಹಾಗೂ ಅತ್ತಾವರ ಬಿಗ್ ಬಝಾರ್ ಭೇಟಿಯಾಗುವಂತೆ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News