ಉಮರ್ ಪಜೀರ್ ನಿಧನಕ್ಕೆ ಬಿಸಿಸಿಐ ಅಧ್ಯಕ್ಷರಿಂದ ಸಂತಾಪ
Update: 2021-01-22 17:24 GMT
ಮಂಗಳೂರು : ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಉಮರ್ ಪಜೀರ್ ನಿಧನಕ್ಕೆ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ಇದರ ಅಧ್ಯಕ್ಷ ಎಸ್.ಎಮ್. ರಶೀದ್ ಹಾಜಿ ಸಂತಾಪ ಸೂಚಿಸಿದ್ದಾರೆ.
ಉಮರ್ ಪಜೀರ್ ಒಬ್ಬ ನಿಷ್ಠಾವಂತ ರಾಜಕಾರಣಿಯಾಗಿದ್ದು, ನೈಜ ಸಾಮಾಜಿಕ ಸೇವೆಯಲ್ಲಿ ಮುಂದಿದ್ದರಲ್ಲದೆ ಉತ್ತಮ ಸಾಮುದಾಯಿಕ ಕಾಳಜಿಯನ್ನು ಹೊಂದಿದ್ದರು. ಅವರ ನಿಧನ ಸಮಾಜ ಮತ್ತು ಸಮುದಾಯಕ್ಕೆ ಒಂದು ದೊಡ್ಡ ನಷ್ಟವಾಗಿದೆ ಎಂದು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.