ಕವಿ ಮುದ್ದಣ ಜಯಂತಿ: ಗೌರವ ಸಮರ್ಪಣೆ
Update: 2021-01-24 15:16 GMT
ಉಡುಪಿ, ಜ.24: ಕವಿ ಮುದ್ದಣ ಎಂಬ ಕಾವ್ಯನಾಮದಿಂದ ಪ್ರಸಿದ್ಧಿ ಪಡೆದ ಹಳೆಗನ್ನಡದ ಸಾಹಿತಿ ನಂದಳಿಕೆ ಲಕ್ಷ್ಮೀನಾರಾಯಣಪ್ಪ ಅವರ ಜಯಂತಿ ಪ್ರಯುಕ್ತ ಇಂದು ಉಡುಪಿ ನಗರಸಭೆ ಕಛೇರಿ ವಠಾರದಲ್ಲಿರುವ ಅವರ ಪ್ರತಿಮೆಗೆ ಗೌರವ ಸಲ್ಲಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಮುದ್ದಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ಸಾಹಿತಿ ತಾರಾನಾಥ್ ಮೇಸ್ತ ಶಿರೂರು, ಆಶಿತ್ ಶೆಟ್ಟಿ ಉಪಸ್ಥಿತರಿದ್ದರು.