ಕುಂದಾಪುರ: ಮೂರು ಜಾನುವಾರುಗಳು ಕಳವು

Update: 2021-01-24 16:35 GMT

ಕುಂದಾಪುರ, ಜ.24: ಹಾಡಿಯಲ್ಲಿ ಮೇಯಲು ಕಟ್ಟಿ ಹಾಕಿದ್ದ ಮೂರು ಜಾನುವಾರು ಕಳವಾಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈನುಗಾರಿಕೆ ಮಾಡಿಕೊಂಡಿರುವ ಕೊರ್ಗಿ ಗ್ರಾಮದ ಕೋಣಟ್ಟು ನಿವಾಸಿ ಶರತ್ ಶೆಟ್ಟಿ ಎಂಬವರು ಜ.20ರಂದು ಬೆಳಗ್ಗೆ 7 ಜಾನುವಾರುಗಳನ್ನು ಮನೆಯ ಕುಟುಂಬದ ಹಾಡಿಯಲ್ಲಿ ಮೇಯಲು ಕಟ್ಟಿ ಹಾಕಿದ್ದು, ಅವುಗಳಲ್ಲಿ ಮೂರು ಜಾನುವಾರುಗಳು ಸಂಜೆ ವೇಳೆ ಕಳವು ಆಗಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News