‘ಕ್ಯಾಂಪಸ್ ಗೇಟ್ ಮೀಟ್ ಅಭಿಯಾನ’ಕ್ಕೆ ಎನ್‌ಎಸ್‌ಯುಐ ಚಾಲನೆ

Update: 2021-01-25 16:59 GMT

ಮಂಗಳೂರು, ಜ.25: ದ.ಕ. ಜಿಲ್ಲಾ ಎನ್‌ಎಸ್‌ಯುಐನಿಂದ ತಿಂಗಳ ಕಾಲ ನಡೆಯಲಿರುವ ‘ಕ್ಯಾಂಪಸ್ ಗೇಟ್ ಮೀಟ್’ ಅಭಿಯಾನಕ್ಕೆ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಸೋಮವಾರ ಚಾಲನೆ ನೀಡಿದರು.

 ಬಳಿಕ ಮಾತನಾಡಿದ ಅವರು, ಅಭಿಯಾನದಲ್ಲಿ ಎನ್‌ಎಸ್‌ಯುಐ ಪದಾಧಿಕಾರಿಗಳು ವಿವಿಧ ಕಾಲೇಜ್ ಕ್ಯಾಂಪಸ್‌ಗೆ ತೆರಳಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಹೋರಾಟದ ಮುಖಾಂತರ ಬಗೆಹರಿಸಲಿರುವರು. ಅಲ್ಲದೆ, ಸ್ಕಾಲರ್ ಶಿಪ್, ಬಸ್ ಪಾಸ್, ಕಾಲೇಜು ಶುಲ್ಕ, ರ್ಯಾಗಿಂಗ್, ಮಾದಕ ದ್ರವ್ಯದ ಬಗ್ಗೆ ಜನ ಜಾಗೃತಿ ನಡೆಯಲಿದೆ ಎಂದು ಹೇಳಿದರು.

ಏಕಕಾಲದಲ್ಲಿ ಜಿಲ್ಲೆಯ ಸುಳ್ಯ, ಮೂಡುಬಿದಿರೆ, ಸುಬ್ರಹ್ಮಣ್ಯ, ಬಂಟ್ವಾಳ ತಾಲೂಕಿನ ಹಲವು ಕಾಲೇಜ್‌ಗಳಲ್ಲಿ ಸೋಮವಾರ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಂಗಳೂರು ಅಧ್ಯಕ್ಷ ಶೌನಕ್ ರೈ, ಮನಾಲಿ, ಸುಳ್ಯ ಅಧ್ಯಕ್ಷ ಕೀರ್ತನ್ ಗೌಡ ಕೊಡಪಾಳ, ಆಶಿಕ್, ಪವನ್, ನಿಶಾಮ್, ಕೌಶಿಕ್ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News