ಕ್ಷೇತ್ರ ಅಪವಿತ್ರಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ

Update: 2021-01-25 17:42 GMT

ಉಳ್ಳಾಲ : ಉಳ್ಳಾಲ ಮತ್ತು ಕೊಣಾಜೆ ಯಲ್ಲಿ ಪವಿತ್ರ ಕ್ಷೇತ್ರ ವನ್ನು ಅಪವಿತ್ರ ಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

ಬಿಜೆಪಿಯವರಿಗೆ ಪ್ರತಿಭಟನೆ ಮಾಡಲು ನೈತಿಕ ಹಕ್ಕು ಇಲ್ಲ, ಪ್ರತಿಭಟನೆಯನ್ನು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಮಾಡಬೇಕು. ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಒತ್ತಾಯಿಸಿದರು.

ಅವರು ಉಳ್ಳಾಲ ದಲ್ಲಿ ಕ್ಷೇತ್ರ ಅಪವಿತ್ರಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಂಗ್ರೆಸ್ ಮುಖಂಡ ದಿನೇಶ್ ರೈ, ಇಂಟೆಕ್ ಮುಖಂಡ ದಿನಕರ್ ಮಾತನಾಡಿದರು.

ಈ ವೇಳೆ ಉಳ್ಳಾಲ ನಗರ ಸಭೆಯ ಅಧ್ಯಕ್ಷ  ಚಿತ್ರ ಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ರಹ್ಮಾನ್ ಕೊಣಾಜೆ, ದಿನೇಶ್ ರೈ, ಎನ್ ಎಸ್ ಕರೀಂ, ದಿನೇಶ್ ಕುಂಪಲ, ಬಾಜಿಲ್ ಡಿಸೋಜ, ತಾ.ಪಂ.ಅಧ್ಯಕ್ಷ ಮುಹಮ್ಮದ್ ಮೋನು, ಸದಸ್ಯ ಸುರೇಖಾ ಚಂದ್ರ ಹಾಸ್, ದಿನಕರ್ ಶೆಟ್ಟಿ, ಹರೀಶ್, ಆಳ್ವಿನ್ ಡಿಸೋಜ, ರಝಿಯ ಇಬ್ರಾಹಿಂ, ಸಿದ್ದೀಕ್, ಡೆನ್ನಿಸ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News