ಮಂಗಳೂರು: ಎಸ್ಡಿಟಿಯು ಆಟೋ ಚಾಲಕರ ಘಟಕದಿಂದ ಗಣರಾಜ್ಯೋತ್ಸವ

Update: 2021-01-26 07:37 GMT

ಮಂಗಳೂರು : ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಆಟೋ ಚಾಲಕರ ಘಟಕ ಮಂಗಳೂರು ನಗರ ಸಮಿತಿ ವತಿಯಿಂದ 72 ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಎಸ್ಡಿಟಿಯು ಆಟೋ ಚಾಲಕರ ಘಟಕದ ಮಂಗಳೂರು ನಗರ ಸಮಿತಿ ಅಧ್ಯಕ್ಷ ಮಜೀದ್ ಉಳ್ಳಾಲ ದ್ವಜಾರೋಹಣಗೈದರು.

ಎಸ್ಡಿಟಿಯು ರಾಜ್ಯ ಕಾರ್ಯದರ್ಶಿ ಶರೀಫ್ ಪಾಂಡೇಶ್ವರ್ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು. ಎಸ್ಡಿಟಿಯು ಜಿಲ್ಲಾ ಸಮಿತಿ ಸದಸ್ಯ ನೌಫಲ್ ಕುದ್ರೋಳಿ, ಸುರೇಶ್ ಕುದ್ರೋಳಿ, ರಾಜೇಶ್ ಉಳ್ಳಾಲ, ಬದ್ರುದ್ದೀನ್ ತುಂಬೆ, ಇಲ್ಯಾಸ್ ಬೆಂಗರೆ, ಲತೀಫ್ ಕುಪ್ಪೆಪದವು ಮತ್ತಿತರರು ಉಪಸ್ಥಿತರಿದ್ದರು.  ಕಾರ್ಯದರ್ಶಿ ಶರೀಫ್ ಕುತ್ತಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News