ತೋಡಾರು : ಆದರ್ಶ ಶಿಕ್ಷಣ ಸಂಸ್ಥೆಯಿಂದ ಗಣರಾಜ್ಯೋತ್ಸವ, ರಕ್ತದಾನ ಶಿಬಿರ

Update: 2021-01-27 05:06 GMT

ತೋಡಾರು : ಆದರ್ಶ ಶಿಕ್ಷಣ ಸಂಸ್ಥೆ ತೋಡಾರು ವತಿಯಿಂದ 72ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. 

ಧ್ವಜಾರೋಹಣವನ್ನು ಡಾ. ಇ.ಕೆ.ಎ. ಸಿದ್ದಿಕ್ ಅವರು ನೆರವೇರಿಸಿದರು. ಸಾಮಾಜಿಕ ಕಾರ್ಯಕರ್ತರಾದ ನೌಷದ್ ಹಾಜಿ ಸೂರಲ್ಪಾಡಿ ಅವರು ಗಣರಾಜ್ಯೋತ್ಸವದ ಮಹತ್ವವನ್ನು ವಿವರಿಸಿದರು.

ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಆಸಿಫ್ ತೋಡಾರು, ಶಾಲಾ ಸಂಚಾಲಕರಾದ ಎಂ.ಎಸ್. ಮುಹಮ್ಮದ್ ಹಾಗೂ ಪ್ರಾಂಶುಪಾಲೆ ಡಾ. ಶಾಂತಿ ವಿಜಯ್ ಹಾಗು ಇತರರು ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ ಆದರ್ಶ ಉತ್ಸವವನ್ನು ಏರ್ಪಡಿಸಲಾಯಿತು. ಇಲ್ಲಿ ಮಕ್ಕಳ ಕರ ಕೌಶಲ್ಯದ ಪ್ರದರ್ಶನವನ್ನು ಮಾಡಲಾಯಿತು. ಲತೀಫಾ ಅವರು ಉತ್ಸವವನ್ನು ಉದ್ಘಾಟಿಸಿದರು. ಗಣರಾಜ್ಯೋತ್ಸವದ ಪ್ರಯುಕ್ತ ಕೇರ್ ಫೌಂಡೇಶನ್ ವತಿಯಿಂದ ರಕ್ತದಾನ ಶಿಬಿರವನ್ನು ಶಾಲಾ ಆವರಣದಲ್ಲಿ ಏರ್ಪಡಿಸಲಾಯಿತು.

ಅನುಷಾ. ಎಂ. ಶೆಟ್ಟಿ ಸ್ವಾಗತಿಸಿ, ಪೂಜಿತ ವಂದಿಸಿದರು. ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಝಾಕಿಯಾ ಬಾನು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News