ದ.ಕ. ಜಿಲ್ಲೆ : ಅಲ್ಲಲ್ಲಿ ಗಣರಾಜ್ಯೋತ್ಸವ

Update: 2021-01-26 11:06 GMT

ಮಂಗಳೂರು : ದ.ಕ. ಜಿಲ್ಲೆಯ ಹಲವು ವಿದ್ಯಾ ಸಂಸ್ಥೆ, ಸಂಘ ಸಂಸ್ಥೆಗಳ ವತಿಯಿಂದ ಇಂದು ಗಣರಾಜ್ಯೋತ್ಸವ ಆಚರಿಸಲಾಯಿತು.

ಅಲ್‌ ಮದೀನಾ ಮಂಜನಾಡಿ

ಅಲ್‌ ಮದೀನಾ ಮಂಜನಾಡಿಯ ಅಲ್ ಮದೀನಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಧ್ವಜಾರೋಹಣಗೈದರು. ಅತಿಥಿಗಳಾಗಿ ಶಾಲಾ ಸಂಚಾಲಕ ಅಬ್ದುಲ್ಲ ಹಾಜಿ ಮೋರ್ಲ, ರಝಾಕ್ ಮಾಸ್ಟರ್ ಅಲ್ ಮದೀನಾ, ಅಬ್ದುಲ್ ಸತ್ತಾರ್, ಶಾಲಾ ಮುಖ್ಯಶಿಕ್ಷಕ ಎಚ್‌ಎಂ ಮುಹಮ್ಮದ್ ಉಪಸ್ಥಿತರಿದ್ದರು.

ಫಲಾಹ್ ಸ್ಕೂಲ್ 

ತಲಪಾಡಿಯ ಫಲಾಹ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ನಾಗತೋಟ ಧ್ವಜಾರೋಹಣಗೈದರು. ಸಂಸ್ಥೆಯ ಉಪಾಧ್ಯಕ್ಷ ಯು.ಬಿ.ಮುಹಮ್ಮದ್, ಕಾರ್ಯದರ್ಶಿ ಎನ್. ಅರಬಿ ಕುಂಞಿ, ಜೊತೆ ಕಾರ್ಯದರ್ಶಿ ಬಶೀರ್ ತಲಪಾಡಿ, ಕೋಶಾಧಿಕಾರಿ ಮಜಲ್ ಅಬ್ಬಾಸ್, ಸದಸ್ಯರಾದ ಇಸ್ಮಾಯಿಲ್ ಟಿ, ಅಬ್ದುಲ್ ನಾಸಿರ್, ಸಂಸ್ಥೆಯ ಆಡಳಿತಾಧಿಕಾರಿ ಮುಹಮ್ಮದ್ ಹನೀಫ್, ಶಿಕ್ಷಕಿಯರಾದ ಲತಾ ಪಿ., ಚಂದ್ರಕಲಾ ಎಂ.ಮತ್ತಿತರರು ಉಪಸ್ಥಿತರಿದ್ದರು.

ಹಿದಾಯತ್ ನಗರ

ಕೋಟೆಕಾರ್ ಸಮೀಪದ ಹಿದಾಯತ್ ನಗರದ ಅಲ್ ಹಿದಾಯ ಜುಮಾ ಮಸ್ಜಿದ್, ಎಸ್‌ವೈಎಸ್, ಎಸೆಸ್ಸೆಫ್ ವತಿಯಿಂದ ನಡೆದ ಗಣರಾಜ್ಯೋತ್ಸವದಲ್ಲಿ ಮಸೀದಿಯ ಅಧ್ಯಕ್ಷ ಮೊಯಿದೀನ್ ಕುಟ್ಟಿ ಧ್ವಜಾರೋಹಣಗೈದರು. ಈ ಸಂದರ್ಭ ಮುಅದ್ಸಿನ್ ಹಸನ್ ಮದನಿ, ಮಸೀದಿಯ ಕಾರ್ಯದರ್ಶಿ ಜಾಬಿರ್ ಹುಸೈನ್. ಎಸ್‌ವೈಎಸ್ ಕಾರ್ಯದರ್ಶಿ ಎಸ್. ಝಾಕಿರ್, ಎಸ್ಸೆಸ್ಸೆಫ್ ಅಧ್ಯಕ್ಷ ಮುಸ್ತಫ ಎಸ್ಸೆಸ್ಸೆಫ್ ಕಾರ್ಯದರ್ಶಿ ಹರ್ಷದ್, ಉಪಾಧ್ಯಕ್ಷ ಮಹಮ್ಮದಲಿ, ಸಿದ್ದೀಕ್ ಟಿ.ಎಚ್., ಫಲುಲ್ ತೋಟ ಪಾಲ್ಗೊಂಡಿದ್ದರು.

ತೆಕ್ಕಿಲ್

ಸುಳ್ಯದ ಗೂನಡ್ಕ ತೆಕ್ಕಿಲ್ ಮಾದರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ತೆಕ್ಕಿಲ್ ಶಾಲೆಯ ಸ್ಥಾಪಕ ಟಿ.ಎಂ.ಶಹೀದ್ ತೆಕ್ಕಿಲ್ ಧ್ವಜಾರೋಹಣಗೈದರು.ಮುಖ್ಯ ಶಿಕ್ಷಕಿ ವಾಣಿ,ದಿನಕರ ಸಣ್ಣಮನೆ ಮತ್ತಿತರರು ಉಪಸ್ಥಿತರಿದ್ದರು.

ಪೋಸ್ಟ್ ಆಫೀಸ್ 

ಮಂಗಳೂರು ಅಂಚೆ ವಿಭಾಗದ ಬಲ್ಮಠ ಅಂಚೆ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಹಿರಿಯ ಅಂಚೆ ಅಧೀಕ್ಷಕ ಹರ್ಷ ಎನ್. ಧ್ವಜಾರೋಹಣಗೈದರು.

ಈ ಸಂಧರ್ಭ ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಬಸ್ರೂರು, ದಿವಾಕರ್, ಚೇತನ್ ಕುಮಾರ್ ಕುಲಶೇಖರ ಪಾಲ್ಗೊಂಡಿದ್ದರು.

ವಿವಿ ಸಂದ್ಯಾ ಕಾಲೇಜು

ಮಂಗಳೂರು ವಿವಿ ಸಂದ್ಯಾ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಮಣಿಪುರ-ಅಸ್ಸಾಂ ರೈಫಲ್ ಕ್ಯಾಪ್ಟನ್ ರಜನೀಶ್ ಸಿದ್ಧಿಯ ಪೋಷಕರಾದ ಲಿನಕಜೆ ರಾಮಚಂದ್ರ ಭಟ್ ಹಾಗೂ ಲಕ್ಷ್ಮಿ ರಾಮಚಂದ್ರ, ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಣಿ ಶ್ರೀವತ್ಸ, ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ., ಎಂ.ಕಾಂ., ಎಂ.ಬಿ.ಎ.(ಐಬಿ) ವಿಭಾಗದ ಸಂಯೋಜಕ ಡಾ. ಜಗದೀಶ ಬಿ., ಕೊಂಕಣಿ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ದೇವದಾಸ್ ಪೈ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News