ಮಕ್ಕಳ ನಾಟಕ ರಂಗ ಪರಿಕರ ಕಾರ್ಯಾಗಾರ ಸಂಪನ್ನ

Update: 2021-01-26 11:07 GMT

ಮಂಗಳೂರು, ಜ.26:ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ಬೈಕಂಪಾಡಿ ವಿದ್ಯಾರ್ಥಿ ಸಂಘದ ಸಭಾಭವನದಲ್ಲಿ ಆಯೋಜಿಸಲಾದ ಎರಡು ದಿನದ ಮಕ್ಕಳ ನಾಟಕದ ರಂಗ ಪರಿಕರ ಕಾರ್ಯಾಗಾರವು ಸಂಪನ್ನಗೊಂಡಿತು.

ಅತಿಥಿಗಳಾಗಿ ನಂದಿನಿ ರಘುಚಂದ್ರ, ಆಶಾ ಪೈ, ಕೆನರಾ ಪಿಯು ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ, ರಂಗಸಂಗಾತಿಯ ಸುರೇಶ್ ಬಜ್ಪೆ, ರಾಮಚಂದ್ರ ಬೈಕಂಪಾಡಿ, ಮಧುಕರ್ ಉಪಸ್ಥಿತರಿದ್ದರು. ಮೈಮ್ ರಾಮದಾಸ್ ಪ್ರಾಸ್ತಾವಿಕವಾಗಿ ಮಾತಾಡಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕ ಪ್ರೇಮನಾಥ ಮರ್ಣೆ, ಸೂರಜ್ ಶೆಟ್ಟಿ ಹೊಯಿಗೆಬೈಲ್ ಮಕ್ಕಳಿಗೆ ಮುಖವಾಡ, ಕಿರೀಟ ಇತ್ಯಾದಿ ತಯಾರಿ ಕುರಿತು ವಿವರಿಸಿದರು.

ಬೈಕಂಪಾಡಿ ರೋಟರಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಉಸ್ಮಾನ್ ಕುಕ್ಕಾಡಿ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯವಾದಿ ಶಶಿರಾಜ್ ಕಾವೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News