ಪ್ರತಿಭಟನೆ ನಡೆದ ರೀತಿಯ ಕುರಿತು ನಾಚಿಕೆಯಾಗಿದೆ, ಹೊಣೆ ಹೊರುತ್ತೇನೆ: ಯೋಗೇಂದ್ರ ಯಾದವ್

Update: 2021-01-26 16:15 GMT

ಹೊಸದಿಲ್ಲಿ, ಜ. 26: ರೈತರ ಟ್ರಾಕ್ಟರ್ ರ್ಯಾಲಿ ಮಂಗಳವಾರ ನಡೆದ ರೀತಿಗೆ ನಾನು ನಾಚಿಕೆ ಪಡುತ್ತೇನೆ. ಅದರ ಹೊಣೆ ಹೊರುತ್ತೇನೆ ಎಂದು ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ನಡೆಯುವ ಯಾವುದೇ ರೀತಿಯ ಹಿಂಸಾಚಾರ ಪ್ರಮಾದಕಾರಿ ಪರಿಣಾಮ ಬೀರುತ್ತದೆ. ಇದನ್ನು ಯಾರು ಮಾಡಿದರು, ಯಾರು ಮಾಡಿಲ್ಲ ಎಂದು ನಾನು ಈ ಸಂದರ್ಭದಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ, ಮೇಲ್ನೋಟಕ್ಕೆ ರೈತರ ಪ್ರತಿಭಟನೆಯಿಂದ ನಾವು ಹೊರಗಿರಿಸಿದ ಜನರು ಇದನ್ನು ಮಾಡಿರುವಂತೆ ಕಾಣುತ್ತದೆ ಎಂದು ಯಾದವ್ ಅವರು ಟಿ.ವಿ. ಚಾನೆಲ್ ಒಂದಕ್ಕೆ ತಿಳಿಸಿದ್ದಾರೆ.

ಯಾವ ಮಾರ್ಗ ನಿರ್ಧರಿಸಲಾಗಿದೆಯೇ, ಅದಕ್ಕೆ ಬದ್ಧರಾಗಿರುವಂತೆ ಹಾಗೂ ಮಾರ್ಗ ಬದಲಾಯಿಸದಂತೆ ನಾನು ನಿರಂತರ ಮನವಿ ಮಾಡಿದ್ದೆ. ಚಳವಳಿ ಶಾಂತಿಯುತವಾಗಿ ನಡೆದರೆ ಮಾತ್ರ ನಾವು ಜಯ ಗಳಿಸಲು ಸಾಧ್ಯವಾಗುತ್ತದೆ ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News