'ಸಿಪಿಎಂಟಿಎ' ಸಂಘದಿಂದ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Update: 2021-01-26 16:19 GMT

ಮಂಗಳೂರು : ಕೆನರಾ ಪ್ಲಾಸ್ಟಿಕ್ ತಯಾರಕರು ಮತ್ತು ವರ್ತಕರ ಸಂಘದ ( ಸಿಪಿಎಂಟಿಎ) ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ ರನ್ನು ಭೇಟಿ ಮಾಡಿ, ಮಂಗಳೂರು ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರಕಾರದಿಂದ ಅನುಮತಿ ದೊರಕಿಸಿಕೊಟ್ಟಿದ್ದ ಕ್ಕಾಗಿ ಕೃತಜ್ಞತೆ ಸಲ್ಲಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿಎ ನಝೀರ್, ಉಪಾಧ್ಯಕ್ಷ ಆಸ್ಕರ್ ಅಲಿ, ಪ್ರ. ಕಾರ್ಯದರ್ಶಿ ಬಿಎ ಇಕ್ಬಾಲ್ ಕಾರ್ಯದರ್ಶಿ ಸುರೇಶ್ ಕರ್ಕೇರ, ರೋಷನ್ ಬಾಳಿಗ, ಹರೀಶ್ ಕರ್ಕೇರ, ಅಝೀಝ್ ಕೃಷ್ಣಾಪುರ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News