ಅಡ್ಡೂರು : 'ಸಂವಿಧಾನ ಅರಿವು ಮತ್ತು ಜಾಗೃತಿ' ಕಾರ್ಯಕ್ರಮ

Update: 2021-01-26 16:22 GMT

ಅಡ್ಡೂರು : 72ನೇ ಗಣರಾಜ್ಯೋತ್ಸವ ಅಂಗವಾಗಿ ಫ್ರೆಂಡ್ಸ್ ಸರ್ಕಲ್ ಕೆಳಗಿನಕೆರೆ ಹಾಗೂ ಎಸ್.ಡಿ.ಎಂ.ಸಿ ಸಂಯುಕ್ತಾಶ್ರಯದಲ್ಲಿ 'ಸಂವಿಧಾನ ಅರಿವು ಮತ್ತು ಜಾಗೃತಿ' ಕಾರ್ಯಕ್ರಮ ಮಂಗಳವಾರ ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹೀಂ, ಮಿಫ್ಟ್ ಕಾಲೇಜ್ ನಿರ್ದೇಶಕ ಎಂ.ಜಿ.ಹೆಗ್ಡೆ, ಪತ್ರಕರ್ತ ಕಳಕೇಶ್ ಗೊರವರ, ಮುಸ್ತಫಾ ದೆಮ್ಮಲೆ, ಅಹ್ಮದ್ ಬಾವಾ, ಎ.ಕೆ.ಅಶ್ರಫ್, ಶೇಖ್ ಮೋನು, ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ದೀಕ್ ಕೆಳಗಿನಕೆರೆ, ಎ.ಕೆ.ಹನೀಫ್,  ಝಕರಿಯಾ ಶಾಹಿಕ್, ಮನ್ಸೂರ್, ಅಶ್ರಫ್ ನಡುಗುಡ್ಡೆ,  ಹಬೀಬ್ ಕಟ್ಟಪುಣಿ, ನೌಫಲ್ ಗೋಳಿಪಡ್ಪು, ಅಡ್ಲೀನ್ ಕ್ಲೀಟಾ ಡಿಸೋಜಾ, ಬಶೀರ್ ಸಾಗರ್ ಮತ್ತಿತರರು ಉಪಸ್ಥಿತರಿದ್ದರು.

ಫಾರೂಕ್ ಕೆಳಗಿನಕೆರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News