ಜ.28ರಂದು ಮಣಿಪಾಲದಲ್ಲಿ ‘ಸಲಾಂ ಕಲಾಂ’

Update: 2021-01-27 15:03 GMT

ಉಡುಪಿ, ಜ.27: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ಡಾ. ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ಮಣಿಪಾಲ ಆಶ್ರಯದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಹಕಾರದಲ್ಲಿ ಗುರುವಾರ ಜ.28ರಂದು ಮಣಿಪಾಲದ ನಿರ್ಮಿತಿ ಕೇಂದ್ರದಲ್ಲಿ ಸಂಜೆ 5:30ರಿಂದ ‘ಸಲಾಂ ಕಲಾಂ’ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ನೆನಪು ಕಾರ್ಯಕ್ರಮ ನಡೆಯಲಿದೆ.

ಇದರಲ್ಲಿ ಡಾ. ಅಬ್ದುಲ್ ಕಲಾಂ ಅವರ ಶಿಷ್ಟಾಚಾರ ಹಾಗೂ ಸಮನ್ವಯ ಅಧಿಕಾರಿಯಾಗಿದ್ದ ಜಯಪ್ರಕಾಶ್ ರಾವ್ ಕೆ. ಅವರ ‘ಹಮಾರಾ ಪಿಆರ್‌ಓ’ ಎಂಬ ಕೃತಿ ಬಿಡುಗಡೆ ಹಾಗೂ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಎದುರು ವೀಣಾವಾದನ ನುಡಿಸಿ ಅವರಿಂದ ಗೌರವ ಪಡೆದ ಮಣಿಪಾಲದ ಪವನಾ ಬಿ. ಆಚಾರ್ ಅವರ ವೀಣಾವಾದನ ‘ವೀಣೆ ಬೆಳಗು ಬೆಡಗು’ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News