ಚಂದ್ರನಗರ: ಸರಕಾರಿ ಉದ್ಯೋಗ ಮಾಹಿತಿ ಶಿಬಿರ

Update: 2021-01-27 15:36 GMT

ಕಾಪು, ಜ.27: ಚಂದ್ರನಗರದ ಮಸ್ಜಿದ್-ಇ-ನೂರ್ ವತಿಯಿಂದ ಸರಕಾರಿ ಉದ್ಯೋಗ ಮಾಹಿತಿ ಶಿಬಿರವು ಮಂಗಳವಾರ ಮಸೀದಿ ಹಾಲ್‌ನಲ್ಲಿ ಜರಗಿತು.

ಸ್ಥಳೀಯ ಖತೀಬ್ ಅಬ್ದುಲ್ ಬಷೀರ್ ಹನೀಫಿ ದುವಾ ನೆರವೇರಿಸಿದರು. ಕಾರ್ಯಕ್ರಮವನ್ನು ಮಜೂರು ಮಸೀದಿಯ ಖತೀಬ್ ಅಬ್ದುಲ್ ರಶೀದ್ ಸಖಾಫಿ ಉದ್ಘಾಟಿಸಿದರು.

ವಕೀಲ ಹಮ್ಜಾತ್ ಹೆಜಮಾಡಿ ವಿದ್ಯಾರ್ಥಿಗಳಿಗೆ ಪ್ರೇರಣಾ ತರಗತಿ ನಡೆಸಿ ದರು. ಅಬ್ದುಲ್ ರಝಾಕ್ ಕಾಪು ಹಾಗೂ ಅಹ್ಮದ್ ನೌಝಲ್ ಮುಲ್ಕಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿದರು. ಸರಕಾರಿ ಹುದ್ದೆಗೆ ನೇಮಕ ಗೊಂಡ ನೌಝಾಲ್ ಮುಲ್ಕಿ, ಆಸ್ಕರ್ ಅಲಿ ಕಿನ್ನಿಗೋಳಿ, ಅನೀಸ್ ಕಿನ್ನಿಗೋಳಿ, ಶಿಫಾಝ್ ಕೊಲ್ನಾಡ್, ಸ್ವಾಬಿರ್ ಉಪ್ಪಿನಂಗಡಿ ಅವರನ್ನು ಅಲ್ ನೂರ್ ಮಸ್ಜಿದ್ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಸೀದಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಚಂದ್ರನಗರ, ಮುಹಮ್ಮದ್ ರಫೀಕ್ ಎನ್‌ಎನ್‌ಓ ಹೆಬ್ರಿ, ಪಿ.ಕೆ.ಅಹ್ಮದ್ ಪುತ್ತಿಗೆ, ಇಸಾಕ್ ಪುತ್ತಿಗೆ, ಅಮೀರ್ ಹಮ್ಜಾ ಕಾಪು, ಇಬ್ರಾಹಿಂ ಮಜೂರು, ನಝೀರ್ ಗ್ಲಾಸ್ ಸೆಂಟರ್, ಝಾಕಿರ್ ಫಕೀರ್ನಕಟ್ಟೆ, ಅಮೀರುದ್ದೀನ್ ಶಿರ್ವ, ಮುಸ್ತಾಕ್ ಅಹಮದ್ ಚಂದ್ರನಗರ, ದಿನಾರ್ ಸಾದಿಕ್ ಕೊಂಬಗುಡ್ಡೆ, ಉಮರ್ ಸಲ್ವ, ಅಸ್ಕರ್ ಗುತ್ತಕಾಡು, ರಝಾಕ್ ಕೊಪ್ಪ ಪತ್ರಕರ್ತರಾದ ಇರ್ಷಾದ್ ಕಿನ್ನಿಗೋಳಿ, ನಝೀರ್ ಪೊಲ್ಯ ಹಾಗೂ ಮಸೀದಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಬ್ದುಲ್ ಝೀಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News