ಮೈಸೂರು ಬಳಿ ರಸ್ತೆ ಅಪಘಾತ: ಮುರುಡೇಶ್ವರದ ಯುವ ಶಿಕ್ಷಕ ಬಲಿ
Update: 2021-01-27 16:52 GMT
ಭಟ್ಕಳ : ಮೈಸೂರು ಬಳಿ ಬುಧವಾರ ನಡೆದ ರಸ್ತೆ ಅಪಘಾತಕ್ಕೆ ಮುರುಡೇಶ್ವರದ ಯುವ ಧರ್ಮ ಗುರು ಮೌಲಾನಾ ಅದ್ನಾನ್ ಖಾನ್ ನದ್ವಿ (23) ಬಲಿಯಾಗಿದ್ದಾರೆ.
ಮೌಲಾನಾ ಅದ್ನಾನ್ ಅವರು ಮುರುಡೇಶ್ವರದ ಮದ್ರಾಸಾ ತನ್ವೀರ್-ಉಲ್-ಇಸ್ಲಾಂನಲ್ಲಿ ಜ.26ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ತಮ್ಮ ದ್ವಿಚಕ್ರ ವಾಹನ ಮೂಲಕ ತನ್ನ ಸ್ನೇಹಿತನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ತೆರಳಿದ್ದರು ಎನ್ನಲಾಗಿದ್ದು, ಮೈಸೂರು ಸಮೀಪ ನಾಗಮಂಗಲ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೌಲಾನಾ ಅದ್ನಾನ್ ಮುರುಡೇಶ್ವರದ ಮುಹಿದ್ದೀನ್ ಮಸೀದಿಯಲ್ಲಿ ಇಮಾಮ್ ಆಗಿ ಸೇವೆ ಸಲ್ಲಿಸುತ್ತಿದ್ದು, ಮದ್ರಸಾ ತನ್ವೀರ್-ಉಲ್-ಇಸ್ಲಾಂನಲ್ಲಿ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.