ಪಶ್ಚಿಮ ಬಂಗಾಳ ಸಚಿವರ ನಿವಾಸದೆದುರು ಬಾಂಬ್ ಎಸೆತ, ಆರು ಜನರ ಬಂಧನ

Update: 2021-01-28 14:39 GMT

ಕೋಲ್ಕತಾ,ಜ.28: ಪಶ್ಚಿಮ ಬಂಗಾಳದ ವಾರ್ತಾ ಮತ್ತು ಸಂಸ್ಕೃತಿ ಸಚಿವ ಇಂದ್ರನೀಲ ಸೇನ್ ಅವರ ಇಲ್ಲಿಯ ನಿವಾಸದೆದುರು ಬುಧವಾರ ರಾತ್ರಿ ನಾಡಬಾಂಬೊಂದನ್ನು ಎಸೆಯಲಾಗಿದ್ದು,ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಮೂರು ದ್ವಿಚಕ್ರ ವಾಹನಗಳು ಮತ್ತು ನಾಡಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ದುಷ್ಕರ್ಮಿಗಳು ಬಾಂಬ್ ಎಸೆದ ಸಂದರ್ಭದಲ್ಲಿ ಸೇನ್ ಅವರು ತನ್ನ ನಿವಾಸದಲ್ಲಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು. ಪ್ರದೇಶದಲ್ಲಿಯ ಸಿಸಿಟಿವಿ ಫೂಟೇಜ್‌ಗಳ ನೆರವಿನಿಂದ ಆರೋಪಿಗಳನ್ನು ಗುರುತಿಸಲಾಗಿದ್ದು,ಅವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News